ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಶಿಕ್ಷಕ ಮದುವೆಯಾಗುವ ಕನಸು ಕಾಣುತ್ತಿದ್ದ. ಆದರೆ, ಹರಿತಾ ಹೆಸರಿನ ಕೇರಳ ಮೂಲದ ಚಾಲಕಿ ಬಳ್ಳಾರಿ ಜಿಲ್ಲೆಯ ಶಿಕ್ಷಕನಿಗೆ ಯಾಮಾರಿಸಿದ್ದಾಳೆ. ಈಗ ಶಿಕ್ಷಕ ಸೈಬರ್ ಠಾಣೆ ಮೆಟ್ಟಿಲು ಏರಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರ ತಾಲೂಕಿನ ಶಿಕ್ಷಕ ದೇವೇಂದ್ರಪ್ಪ 2ನೇ ಮದುವೆಯಾಗಲು ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಹಾಕಿದ್ದಾರೆ. ಯುವತಿಯೊಬ್ಬಳು ತನಿಗೆ ಒಪ್ಪಿಗೆ ಇದೆ ಎಂದು ಫೋಟೋ ಹಾಗೂ ಫ್ರೊಫೈಲ್ ಕಳುಹಿಸಿದ್ದಾಳೆ. ನಾನೀಗ ಎಂಬಿಬಿಎಸ್ ಓದುತ್ತಿದ್ದೇನೆ. ಮುಗಿದ ಬಳಿಕ ಮದುವೆಯಾಗುತ್ತೇನೆ ಎಂದಿದ್ದಾಳೆ. ಹೀಗಾಗಿ ವರ್ಷಾನುಗಟ್ಟಲೇ ಮದುವೆ ಮುಂದು ಹಾಕುತ್ತಾ ಬಂದಿದ್ದಾಳೆ.
ಫೋನ್ ನಲ್ಲಿ ಮಾತನಾಡುತ್ತಾ, ಚಂದದ ಫೋಟೋಗಳನ್ನು ಕಳುಹಿಸುತ್ತಾ, ಮಾದಕ ಮೆಸೇಜ್ ಗಳನ್ನು ಮಾಡುತ್ತಾ ಬಂದಿದ್ದಾಳೆ. ಆಗಾಗಾ ಆಕೆ ಕೇಳಿದಂತೆ ಹಣ ನೀಡುತ್ತಾ ಬಂದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ಯುವತಿ ಫೋಟೋ, ಮಾತು, ಮೆಸೇಜ್ ನಂಬಿ ಮರುಳಾದ ಶಿಕ್ಷಕನಿಗೆ ತಾನು ಮೋಸ ಹೋಗಿದ್ದಾನೆ ಎಂದು ಈಗ ತಿಳಿದು ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ.