ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರಿಗೆ ಅಧಿಕಾರದ ಮದದ ಮತ್ತಿನಲ್ಲಿ ತೇಲಾಡ್ತಿದ್ದಾರೆ. ಆದ್ರಿಂದ ಮೊದಲು ತುರ್ತು ಚಿಕಿತ್ಸೆ ಮಾಡಿಸಿಕೊಳ್ಳುವುದು ಒಳ್ಳೆಯದು. ನಾನು ಮುಖ್ಯಮಂತ್ರಿಯಾಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಕಂಟ್ರೋಲ್ ಮಾಡಲು ವಿಶೇಷ ತಂಡ ರಚನೆ ಮಾಡಿದ್ದೆ. ಇದ್ರಿಂದಾಗಿ ದಂಧೆಕೋರರು ಶ್ರೀಲಂಕಾ ಹಾರಿದ್ರು ಎಂದು ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ ಮಾಡಿದ್ರು.
ಅಲ್ದೇ, ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾ ಬಳಸಿಕೊಂಡೆ ಬಿಜೆಪಿ, ಸರ್ಕಾರದಲ್ಲಿದ್ದ ನಮ್ಮ ಶಾಸಕರನ್ನ ಬುಕ್ ಮಾಡಿಕೊಂಡಿದ್ರು ಎಂಬುವುದು ಗುಟ್ಟಾಗಿ ಉಳಿದಿಲ್ಲ ಎಂದು ಕಿಡಿ ಕಾರಿದ್ದಾರೆ.
ಈ ಹೇಳಿಕೆ ಸಂಬಂಧ ಸಚಿವ ಸಿ.ಟಿ ರವಿ ಕಿಡಿ ಕಾರಿದ್ದು, ಹಚ್.ಡಿ ಕುಮಾರಸ್ವಾಮಿ ಮೊದಲು ಪರೀಕ್ಷೆಗೆ ಒಳಪಡಿಸಬೇಕು ಎಂದು ಟಾಂಗ್ ಕೊಟ್ಟಿದ್ದಾರೆ. ಮೈತ್ರಿ ಸರ್ಕಾರ ಯಾಕೆ ಬಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಸರಿಯಾಗಿ ಹೇಳಿದ್ದಾರೋ ಮತ್ತಿನಲ್ಲಿ ಹೇಳಿದ್ದಾರೋ ಎಂಬುವುದನ್ನ ತಿಳಿಯಲು ತಪಾಸಣೆ ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ.