ಸಿಂದಗಿ: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪಟ್ಟಣದಲ್ಲಿ ಫೆಬ್ರವರಿ 16ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನ ಆಯೋಜಿಸಲಾಗಿದೆ. ಇದೆ ಭಾನುವಾರ ಸಂಜೆ 5.30ಕ್ಕೆ ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತ್ನಾಡಿದ ಬಾಗಲಕೋಟೆ ಜಿಲ್ಲೆಯ ಸಮನ್ವಯ ವೆಂಕಟರಮಣ ನಾಯ್ಕ, ಮೊದಲ ಬಾರಿಗೆ ಸಿಂದಗಿಯಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನ ಆಯೋಜನೆ ಮಾಡಲಾಗಿದೆ. ಇದರಲ್ಲಿ ಮುಖ್ಯ ಭಾಷಣಕಾರರಾಗಿ ಪ್ರಮೋದ ಮುತಾಲಿಕ್ ಭಾಗವಹಿಸಲಿದ್ದಾರೆ ಅಂತಾ ತಿಳಿಸಿದ್ರು. ಈ ಸಮಿತಿ ಕಳೆದ 10 ವರ್ಷಗಳಿಂದ 13 ರಾಜ್ಯಗಳಲ್ಲಿ 7 ಭಾಷೆಗಳಲ್ಲಿ 1,740ಕ್ಕೂ ಹೆಚ್ಚು ಸಭೆಗಳನ್ನ ಮಾಡಿದೆ ಎಂದ ಅವರು, ವಿಜಯಪುರದಲ್ಲಿ ಮೂರು ಬಾರಿ ಮಾಡಿದ್ದೇವೆ. ಸಿಂದಗಿಯಲ್ಲಿ ಮೊದಲು ಅಂತಾ ತಿಳಿಸಿದ್ರು.
ಪಟ್ಟಣದಲ್ಲಿ ಈಗಾಗ್ಲೇ ಎಲ್ಲ ರೀತಿಯ ಪ್ರಚಾರ ನಡೆಸಿದ್ದು, ಸುತ್ತಲಿನ ಹಳ್ಳಿಗಳಲ್ಲಿಯೂ ಪ್ರಚಾರ ನಡೆಸಲಾಗಿದೆ. ಹಿಂದೂ ಸಂಸ್ಕೃತಿಯನ್ನ ಉಳಿಸುವುದು ಹಾಗೂ ಅದನ್ನ ಬೆಳೆಸಿಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಸನಾತನ ಸಂಸ್ಥೆಯ ಬೆಂಬಲ ಸಹಯಿದೆ ಅಂತಾ ತಿಳಿಸಿದ್ರು. ಈ ವೇಳೆ ಮಾತ್ನಾಡಿದ ಸನಾತನ ಸಂಸ್ಥೆಯ ಸುಜಾತಾ ಹುಳಿಪಲ್ಲೆ, ಹಿಂದೂ ರಾಷ್ಟ್ರಜಾಗೃತ ಸಭೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಅಂತಾ ತಿಳಿಸಿದ್ರು.
ಪ್ರತೀಕ ಪೀರಾಪುರ ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದ್ರು. ಶಶಾಂಕ ಪಾಟೀಲ, ಅರವಿಂದ ಕೊರಳ್ಳಿ, ಯಲ್ಲಾಲಿಂಗ ಬಡಿಗೇರ ಸೇರಿ ಹಲವರು ಭಾಗವಹಿಸಿದ್ರು.