Search

ಗುಮ್ಮಟನಗರಿಯಲ್ಲಿ ಕಳ್ಳರ ಕೈಚಳಕ

354

ಪ್ರಜಾಸ್ತ್ರ ಅಪರಾಧ ಸುದ್ದಿ

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಕಳ್ಳತನ ನಡೆದಿದೆ. ಪಟ್ಟಣದ ಹುಡ್ಕೋ ಕಾಲೋನಿಯ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣದ ಜೊತೆಗೆ ನಗದು ಸಹ ಕಳ್ಳತನ ಮಾಡಲಾಗಿದೆ.

ಎಂ.ಎಸ್. ಗಡೇದ ಎಂಬುವರ ಮನೆಯ ಬೀಗ ಮುರಿದ ಕಳ್ಳರು 15 ಗ್ರಾಂ ಚಿನ್ನ, 40-50 ಗ್ರಾಂ ಬೆಳ್ಳಿ ಹಾಗೂ 75 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ.

ಮುದ್ದೇಬಿಹಾಳ ಅಂಚೆಕಚೇರಿಯಲ್ಲಿ ಸಹಾಯಕರಾಗಿರುವ ಎಂ.ಎಸ್. ಗಡೇದ ಎಂಬುವರು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!