ಪ್ರಜಾಸ್ತ್ರ ಅಪರಾಧ ಸುದ್ದಿ
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಕಳ್ಳತನ ನಡೆದಿದೆ. ಪಟ್ಟಣದ ಹುಡ್ಕೋ ಕಾಲೋನಿಯ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣದ ಜೊತೆಗೆ ನಗದು ಸಹ ಕಳ್ಳತನ ಮಾಡಲಾಗಿದೆ.
ಎಂ.ಎಸ್. ಗಡೇದ ಎಂಬುವರ ಮನೆಯ ಬೀಗ ಮುರಿದ ಕಳ್ಳರು 15 ಗ್ರಾಂ ಚಿನ್ನ, 40-50 ಗ್ರಾಂ ಬೆಳ್ಳಿ ಹಾಗೂ 75 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ.
ಮುದ್ದೇಬಿಹಾಳ ಅಂಚೆಕಚೇರಿಯಲ್ಲಿ ಸಹಾಯಕರಾಗಿರುವ ಎಂ.ಎಸ್. ಗಡೇದ ಎಂಬುವರು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.