ಪ್ರಜಾಸ್ತ್ರ ಸುದ್ದಿ
ಸಿಂದಗಿ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಮೊಂಬತ್ತಿ ಅಭಿಯಾನ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ. ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಮನೆ ಮುಂದೆ ಮೊಂಬತ್ತಿ ಅಭಿಯಾನ ನಡೆಸಲಾಗುತ್ತಿದೆ.
ನೇಹಾಳಿಗೆ ಆದ ಪರಿಸ್ಥಿತಿ ಮುಂದೆ ನಮ್ಮ ಮಕ್ಕಳಿಗೂ ಆಗಬಹುದು. ಹೀಗಾಗಿ ಆಕೆಗೆ ನ್ಯಾಯ ಸಿಗಬೇಕು. ಕೊಲೆಗಾರನ ವಿರುದ್ಧ ಯಾವೆಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತೆ ಎನ್ನುವ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವುದರ ಜೊತೆಗೆ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಕೊರಲಾಗುವುದು ಎಂದು ಈ ಅಭಿಯಾನದ ಪರಿಕಲ್ಪನೆ ಹುಟ್ಟು ಹಾಕಿರುವ ಪತ್ರಕರ್ತ ಶಿವಾನಂದ ಆಲಮೇಲ ತಿಳಿಸಿದ್ದಾರೆ.