ಚೆಲ್ಲಾಟದ ಚಂಚಲೆ ಪತಿಯ ಉಸಿರನ್ನೇ ನಿಲ್ಲಿಸಿದ್ಳು

297

ಪ್ರಜಾಸ್ತ್ರ ಅಪರಾಧ ಸುದ್ದಿ

ಚಿಕ್ಕಮಗಳೂರು: ಸಂಸಾರ ಅಂದ್ರೆ ಪತಿ-ಪತ್ನಿ ಇಬ್ಬರು ಚೆನ್ನಾಗಿದ್ದಾಗ ಜೀವನ ಸುಂದರವಾಗಿರುತ್ತೆ. ಒಂದಿಷ್ಟು ಕಿತ್ತಾಟ, ಗಲಾಟೆ, ಮುನಿಸು ಇದ್ರೆ ಅದ್ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗಬಹುದು. ಆದ್ರೆ, ಗಂಡ ಪರಸ್ತ್ರೀಗೆ ಆಸೆ ಪಡುವುದಾಗಲಿ, ಹೆಂಡ್ತಿ ಪರಪುರುಷನ ಸಂಗ ಬಯಿಸುವುದಾಗಲಿ ಮಾಡಿದ್ರೆ ಅಲ್ಲಿನ ಅಂತ್ಯ ದುರಂತವೇ ಆಗಿರುತ್ತೆ.

ಕಡೂರು ತಾಲೂಕಿನ ಸಖರಾಯಪಟ್ಟಣದ ದೊಡ್ಡಿಹಟ್ಟಿಯಲ್ಲಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಯನ್ನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪ್ರದೀಪ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಈತನ ಪತ್ನಿ ರಾಗಿಣಿ, ಪ್ರಿಯಕರ ಶ್ರೀನಿವಾಸ ಸೇರಿ ವೇಲ್ ನಿಂದ ಪ್ರದೀಪನ ಉಸಿರು ನಿಲ್ಲಿಸಿದ್ದಾರೆ. ಬಳಿಕ ಎಸ್ಕೇಪ್ ಆಗಲು ನೋಡಿದ ಇವರನ್ನ ಸ್ಥಳೀಯರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಹಿನ್ನೆಲೆ:

ಕಳೆದ 10 ವರ್ಷಗಳ ಹಿಂದೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡಿನ ರಾಗಿಣಿಯನ್ನ ಪ್ರದೀಪ ಮದುವೆಯಾಗಿದ್ದ. ಮೊದಲಿನಿಂದಲೂ ಚಂಚಲೆಯಾಗಿದ್ದ ರಾಗಿಣಿ ಅಲ್ಲಿಯೂ ಅಕ್ರಮ ಸಂಬಂಧ ಹೊಂದಿದ್ಳು. ಇದನ್ನ ತಿಳಿದ ಪತಿ ದೊಡ್ಡಹಟ್ಟಿ ಗ್ರಾಮಕ್ಕೆ ಬಂದಿದ್ದ. ಗಾರೆ ಕೆಲಸ ಮಾಡಿಕೊಂಡು ಹೇಗೋ ಜೀವನ ನಡೆಸ್ತಿದ್ದ. ಇವನ ಜೊತೆಯೇ ಗಾರೆ ಕೆಲಸ ಮಾಡ್ತಿದ್ದ ಗುಬ್ಬಹಳ್ಳಿಯ ಶ್ರೀನಿವಾಸ ರಾಗಿಣಿ ಜೊತೆ ಸಂಬಂಧ ಬೆಳೆಸಿದ್ದಾನೆ.

ಮೊದ್ಲೇ ಚೆಲ್ಲು ಚೆಲ್ಲಾಗಿ ಆಡ್ತಿದ್ದ ರಾಗಿಣಿ, ಗಂಡ ಎರಡು ಮಕ್ಕಳ ಜೊತೆ ಜೀವನ ಮಾಡುವುದು ಬಿಟ್ಟು ಪರಪುರುಷನ ತೆಕ್ಕೆಯಲ್ಲಿ ಬಿದ್ದು ಹೊರಳಾಡಿದ್ದಾಳೆ. ಪತಿ ಪ್ರದೀಪ ಇವರಿಬ್ಬರಿಗೂ ಎಷ್ಟೇ ಹೇಳಿದ್ರೂ ಕೇಳಿಲ್ಲ. ಪತ್ನಿಯ ಮೇಲೆ ತುಂಬಾ ಪ್ರೀತಿಯಿಟ್ಟುಕೊಂಡಿದ್ದ ಪತಿ ಅವಳಾಟಕ್ಕೆ ಬೇಸತ್ತು ಕುಡಿಯುವುದನ್ನ ಕಲಿತಿದ್ದ.

ಹೀಗಿರುವಾಗ ಕಳೆದ ಭಾನುವಾರ ರಾತ್ರಿ ಶ್ರೀನಿವಾಸ ಸೀದಾ ಇವರ ಮನೆಗೆ ಬಂದು ನಿನ್ನ ಹೆಂಡ್ತಿಯನ್ನ ನನ್ಗೆ ಬಿಟ್ಟುಕೊಂಡು ಎಂದು ನೇರವಾಗಿ ಕೇಳಿದ್ದಾನೆ. ಆಗ ಒಂದಿಷ್ಟು ಜಗಳವಾಗಿದೆ. ಮೋಹದ ಅಮಲಿನಲ್ಲಿದ್ದ ರಾಗಿಣಿ ಹಾಗೂ ಶ್ರೀನಿವಾಸ ಸೇರಿಕೊಂಡು ವೇಲ್ ನಿಂದ ಪ್ರದೀಪನನ್ನ ಹತ್ಯೆ ಮಾಡಿದ್ದಾರೆ. ಅಲ್ಲಿಗೆ ಅಮಾಯಕ ಜೀವ ಬಲಿಯಾಗಿದೆ. ಮಕ್ಕಳು ಅನಾಥವಾಗಿವೆ. ಮೋಸಗಾತಿ ಮತ್ತು ಪ್ರಿಯಕರ ಜೈಲು ಪಾಲಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!