ಪತ್ನಿ ಮಾತಿಗೆ ಮನನೊಂದು ಪತಿ ಆತ್ಮಹತ್ಯೆ

388

ಪ್ರಜಾಸ್ತ್ರ ಸುದ್ದಿ

ತುಮಕೂರು: ಪತ್ನಿಯ ಕಾಟದಿಂದ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಹತ್ತಿರ ಕುಂದೂರುಪಾಳ್ಯದಲ್ಲಿ ನಡೆದಿದೆ. ನಮ್ಮ ಮೆಟ್ರೋ ಎಂಜಿನಿಯರ್ ಮಂಜುನಾಥ್(38) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪತ್ನಿ ಪ್ರಿಯಾಂಕಾ ಪತಿಗೆ ಕಾಡಿಸುತ್ತಿದ್ದಳಂತೆ. ಹಳ್ಳಿ ಗುಗ್ಗು ಎಂದು ಪದೆಪದೆ ಕಾಟ ಕೊಡುತ್ತಿದ್ದಳಂತೆ. ಇಷ್ಟಕ್ಕೆ ಮನನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮೊದಲು ಸಹೋದರನಿಗೆ ವಾಟ್ಸಪ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸಿದ್ದಾನೆ.

ಮಗಳನ್ನು ನೀವೇ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ಹೆಂಡ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಮಂಜುನಾಥ್ ಕುಟುಂಬಸ್ಥರ ಪತ್ನಿ ಪ್ರಿಯಾಂಕಾ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!