ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಕೆ.ಆರ್ ಪುರಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗ ಈ ಪ್ರಕರಣ ಸಂಬಂಧ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ವಿರುದ್ಧವೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ರಾಜಕೀಯ ಒತ್ತಡ ಹಾಗೂ ದ್ವೇಷವೇ ಇನ್ಸ್ ಪೆಕ್ಟರ್ ಸಾವಿಗೆ ಕಾರಣವೆಂದು. ಇದಕ್ಕೆ ಪರೋಕ್ಷವಾಗಿ ಕಮಿಷನರ್ ಕಾರಣವೆಂದು ಆರೋಪಿಸಿ ಜಾನ್ ಪಾಲ್ ಎಂಬುವರು ದೂರು ಸಲ್ಲಿಸಿದ್ದಾರೆ. ಎಂ.ಜಿ ರೋಡ್ ನಲ್ಲಿ 100ಕ್ಕೂ ಅಧಿಕ ಪಬ್ ಗಳಿವೆ. ಅವುಗಳು ಅವಧಿ ಮೀರಿ ತೆಗೆದಿರುತ್ತವೆ. ಅವುಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಆದರೆ, ಇನ್ಸ್ ಪೆಕ್ಟರ್ ನಂದೀಶ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಆರ್ ಪುರಂನಲ್ಲಿ ಪಬ್ ವೊಂದು ಅವಧಿ ಮೀರಿ ತೆಗೆದಿರುತ್ತೆ ಎಂದು ಹೇಳಿ ಅಮಾನತು ಮಾಡಲಾಗಿತ್ತು.
ಕಮಿಷನರ್ ಪ್ರತಾಪ್ ರೆಡ್ಡಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ. ಹೀಗಾಗಿ ಇದರ ಬಗ್ಗೆ ಸಮ್ರಗ ತನಿಖೆ ನಡೆಸಬೇಕೆಂದು ಡಿಜಿಪಿಗೆ ನಿರ್ದೇಶನ ನೀಡಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.