ಯುವಕ ಚಂದ್ರು ಹತ್ಯೆ ಕೇಸ್: ಪೊಲೀಸ್ ಆಯುಕ್ತರು ಹೇಳಿದ್ದೇನು?

415

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ನಗರದ ಜೆ.ಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 5ರ ಮಧ್ಯರಾತ್ರಿ ಚಂದ್ರು ಎಂಬಾತನ ಕೊಲೆ ನಡೆದಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾಹಿತಿ ನೀಡಿದ್ದಾರೆ.

ಸೈಮನ್ ರಾಜ್ ಹಾಗೂ ಚಂದ್ರು ಅನ್ನೋ ಯುವಕರು ಊಟಕ್ಕೆಂದು ಮೈಸೂರು ರಸ್ತೆಗೆ ತೆರಳಿ ವಾಪಸ್ ಆಗುವಾಗ, ಶಾಹಿದ್ ಎಂಬಾತ ಚಾಲನೆ ಮಾಡುತ್ತಿದ್ದ ಮತ್ತೊಂದು ಬೈಕ್ ನಡುವೆ ಡಿಕ್ಕಿಯಾಗಿದೆ. ಈ ವೇಳೆ ಚಂದ್ರುವಿನ ಬಲ ತೊಡೆಗೆ ಶಾಹಿದ್ ಇರಿದು ಪರಾರಿಯಾಗಿದ್ದಾನೆ.

ಗಾಯಾಳು ಚಂದ್ರುನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದ್ದು, ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!