ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕಾಲಿವುಡ್ ಸಿನಿಮಾ ಜೈ ಭೀಮ್ ಓಟಿಟಿಯಲ್ಲಿ ರಿಲೀಸ್ ಆಗಿ ಭರ್ಜರಿಯಾಗಿ ರೆಸ್ಪಾನ್ಸ್ ಪಡೆಯುತ್ತಿದೆ. 1995ರಲ್ಲಿ ನಡೆದ ಸತ್ಯ ಘಟನೆ ಆಧಾರಿತ ಚಿತ್ರದಲ್ಲಿ ವಕೀಲನಾಗಿ ನಟ ಸೂರ್ಯ ನಟಿಸಿದ್ದಾರೆ. ಇವರು ರೀಲ್ ಆದರೆ, ಇವರ ಪಕ್ಕದಲ್ಲಿ ನಿಂತಿರುವ ನಿವೃತ್ತಿ ನ್ಯಾಯಮೂರ್ತಿ ಚಂದ್ರು ಅವರು ರಿಯಲ್ ಹೀರೋ.
ಇಳವರ್ ಅನ್ನೋ ಬುಡಕಟ್ಟು ಸಮಾಜದ ಮೇಲೆ ನಡೆದ ಅನ್ಯಾಯದ ಕುರಿತು ಸುದೀರ್ಘವಾಗಿ ಹೋರಾಟ ನಡೆಸಿ ಅವರಿಗೆ ನ್ಯಾಯ ಕೊಡಿಸಿಕೊಟ್ಟವರು. ಹೀಗಾಗಿ ಸಾಕಷ್ಟು ಸಾಮಾಜಿಕ ಪ್ರಕರಣಗಳಲ್ಲಿ ಜಯ ತಂದು ಕೊಟ್ಟವರು ಈ ಲಾಯರ್ ಚಂದ್ರು. ಮುಂದೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ 96 ಸಾವಿರ ಪ್ರಕರಣಗಳಿಗೆ ತೀರ್ಪು ಕೊಟ್ಟಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಯಾದರೂ ಸಾಮಾನ್ಯ ಜನರಂತೆ ನಡೆದುಕೊಳ್ಳುತ್ತಿದ್ದರು. ತಮ್ಮ ಕಾರಿಗೆ ಅಳವಡಿಸಿದ್ದ ಕೆಂಪು ದೀಪ ತೆಗೆದು ಮಾದರಿಯಾದರು. ಹೆಚ್ಚಿನ ಭದ್ರತೆ ಪಡೆಯಲಿಲ್ಲ. 2013ರಲ್ಲಿ ನಿವೃತ್ತಿ ಹೊಂದಿದ ಇವರು ಸರ್ಕಾರಿ ಕಾರನ್ನು ಬಿಟ್ಟು ಲೋಕಲ್ ಟ್ರೇನ್ ಮೂಲಕ ಮನೆಗೆ ತೆರಳುತ್ತಾರೆ. ಇಂತಹ ಸರಳ ವ್ಯಕ್ತಿತ್ವದ ಚಂದ್ರು ಅವರು ಬರೆದ ‘ಲೆಗಸಿ ಟು ಮೈ ಕೇಸ್’’ ಅನ್ನೋ ಪುಸ್ತಕದಲ್ಲಿನ ಕಥೆಯೊಂದನ್ನು ಇಟ್ಟುಕೊಂಡು ಜೈ ಭೀಮ್ ಚಿತ್ರ ಮಾಡಲಾಗಿದೆ. ಇದು ಅಪಾರ ಪ್ರಮಾಣದಲ್ಲಿ ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತಿದೆ.