ಅಂಬೇಡ್ಕರ್ ಗೆ ಅವಮಾನ: 7 ವಿದ್ಯಾರ್ಥಿಗಳ ಬಂಧನ

134

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ಕಿರುನಾಟಕ ಪ್ರದರ್ಶನ ವೇಳೆ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಪ್ರಕರಣ ಸಂಬಂಧ 7 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸಿದ್ದಾಪುರ ಠಾಣೆ ಪೊಲೀಸರು ವಿದ್ಯಾರ್ಥಿಗಳು ಬಂಧಿಸಿದ್ದಾರೆ.

ರಿಷಬ್ ಜೈನ್, ಪ್ರಣವ್ ಪಲ್ಲಿಯಿಲ್, ಸುಜಲ್, ಗೌರವ್ ಪವಾರ್, ಆಶಿಶ್ ಅಗರ್ವಾಲ್, ನೈಮಾ ನಾಗ್ರಿಯಾ ಹಾಗೂ ಸ್ಮೃತಿ ಬಿ.ಆರ್ ಬಂಧಿತ ವಿದ್ಯಾರ್ಥಿಗಳು. ಇವರೆಲ್ಲ ಬಿಬಿಎ 5ನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾರೆ. ಫೆಬ್ರವರಿ 8ರಂದು ಕಾಲೇಜಿನಲ್ಲಿ ನಡೆದ ಫೆಸ್ಟ್ ನಲ್ಲಿ ಕಿರು ನಾಟಕ ಪ್ರದರ್ಶನ ಮಾಡಿದ್ದಾರೆ. ಬಿ.ಆರ್ ಅಂಬೇಡ್ಕರ್ ಅಲ್ಲ. ಬಿಯರ್ ಅಂಬೇಡ್ಕರ್. ಡೋಂಟ್ ಟಚ್ ಮಿ, ಟಚ್ ಮಿ ಅಂತಾ ಹಾಡುವೊಂದು ಹಾಕಿ ಅವಮಾನ ಮಾಡಿಲಾಗಿದೆ ಎಂದು ಆರೋಪಿಸಲಾಗಿದೆ.

ಈ ಘಟನೆ ಸಂಬಂಧ ರಾಜ್ಯದ ವಿವಿಧ ಕಡೆ ದೂರು ದಾಖಲಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈಗ 7 ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!