ಹಿಂದಿ ದಿವಸ ವಿರೋಧಿಸಿ ನಾಳೆ ಜೆಡಿಎಸ್ ಪ್ರತಿಭಟನೆ

139

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಮಾಡಿಕೊಂಡು ಬರಲಾಗುತ್ತಿದೆ. ಕೇಂದ್ರ ಸರ್ಕಾರ ಬಲವಂತಾಗಿ ಹಿಂದಿ ದಿವಸ್ ಆಚರಣೆಗೆ ತಂದಿದೆ. ಸ್ಥಳೀಯ ಭಾಷೆಗಳನ್ನು ಕೊಲ್ಲಲು ಇದನ್ನು ಮಾಡಲಾಗಿದೆ ಎಂದು, ಜೆಡಿಎಸ್ ವತಿಯಿಂದ ನಾಳೆ ಪ್ರತಿಭಟನೆ ನಡೆಸಲಾಗುತ್ತಿದೆ.

ಈಗಾಗ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪತ್ರ ಬರೆದಿದ್ದು, ಹಿಂದಿ ದಿನವನ್ನು ವಿರೋಧಿಸಬೇಕು ಎಂದು. ಅಲ್ಲದೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಿಎಂಗೆ ಪತ್ರ ಬರೆದು, ಸರ್ಕಾರದಿಂದ ಹಿಂದಿ ದಿವಸ್ ಆಚರಿಸಬಾರದು ಎಂದಿದ್ದಾರೆ. ಇದರ ಜೊತೆಗೆ ಜೆ.ಪಿ ಭವನದ ಮುಂಭಾಗದಲ್ಲಿ ಜೆಡಿಎಸ್ ವತಿಯಿಂದ ಮಧ್ಯಾಹ್ನ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!