ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಿಗ್ ಬಾಸ್ ಶೋ ಬಗ್ಗೆ ಸಿಪಿಐ ಮುಖಂಡ ನಾರಾಯಣ ವಾಗ್ದಾಳಿ ನಡೆಸಿದ್ದು, ಅದೊಂದು ವೇಶ್ಯಾಗೃಹದಂತೆ ಕಾಣಿಸುತ್ತದೆ ಎಂದಿದ್ದಾರೆ. ತೆಲುಗು ಬಿಗ್ ಬಾಸ್ ಶೋ ವಿರುದ್ಧ ಕಿಡಿ ಕಾರಿದ್ದು, ಇದನ್ನು ಹೋಸ್ಟ್ ಮಾಡುವ ನಟ ನಾಗಾರ್ಜುನ್ ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮದುವೆಯಾದವರಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ. ಮದುವೆಯಾಗದೆ ಇರುವವರು ಏನು ಮಾಡಬೇಕು ನಾಗಣ್ಣ ಎಂದಿದ್ದಾರೆ. ಅಣ್ಣ, ಅಕ್ಕ, ತಂಗಿ, ತಮ್ಮ ಹೀಗೆ ಯಾವುದೇ ಸಂಬಂಧ ಇಲ್ಲದವರನ್ನು ಹೀಗೆ ಕೂಡಿ ಹಾಕಿ ಸಾಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಿ. ಬಿಗ್ ಬಾಸ್ ಮನೆ ನನಗೆ ವೇಶ್ಯಾಗೃಹದಂತೆ ಕಾಣುತ್ತಿದೆ. ಕೂಡಲೇ ಇಂತಹ ಶೋಗಳನ್ನು ನಿಲ್ಲಿಸಬೇಕು ಎಂದಿದ್ದಾರೆ.
ಸಿಪಿಐ ಮುಖಂಡ ನಾರಾಯಣ ಹೇಳಿಕೆ ಕುರಿತು ಪರ ವಿರೋಧದ ಚರ್ಚೆಗಳು ನಡೆದಿವೆ. ವೇಶ್ಯಾಗೃಹಕ್ಕೆ ಹೋಲಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದ ವಾರದಿಂದ ತೆಲುಗು ಬಿಗ್ ಬಾಸ್ ಶೋ ಶುರುವಾಗಿದೆ.