ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ನವದೆಹಲಿ: ಖ್ಯಾತ ಉರ್ದು ಕವಿ, ಚಿತ್ರ ಸಾಹಿತಿ ಗುಲ್ಜಾರ್ ಹಾಗೂ ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ 58ನೇ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿದೆ. ಶನಿವಾರ ಪ್ರಶಸ್ತಿ ಆಯ್ಕೆ ಸಮಿತಿ ಈ ಇಬ್ಬರು ಸಾಧಕರ ಹೆಸರನ್ನು ಘೋಷಿಸಿದೆ.
ಪದ್ಮಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಗುಲ್ಜಾರ್ ಅವರು ಬಹುದೊಡ್ಡ ಹೆಸರು ಮಾಡಿದ ಕವಿ. ತುಳಸಿ ಪೀಠದ ಸಂಸ್ಥಾಪಕ ಮುಖ್ಯಸ್ಥರಾಗಿರುವ ರಾಮಭದ್ರಾಚಾರ್ಯ ಅವರು ಆಧ್ಯಾತ್ಮಿಕ ಮತ್ತು ಶಿಕ್ಷಣ ತಜ್ಞರು. ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.