ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಗಡಿ ಸಮಸ್ಯೆ ನಡೆಯುತ್ತಿರುವ ಸಂದರ್ಭದಲ್ಲಿ ಕನ್ನಡದ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆಯಿತು. ಈಗ ಮನೆಗಳ ಮೇಲಿನ ಬಾವುಟವನ್ನು ಪೊಲೀಸರೆ ತೆರವು ಮಾಡುತ್ತಿದ್ದಾರೆ ಅನ್ನೋ ಆರೋಪವನ್ನು ಕೆಪಿಸಿಸಿ ಸದಸ್ಯೆ ಸರಳ ಸಾತ್ಪುತೆ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬಿಜೆಪಿ ಸರ್ಕಾರ, ಲೋಕಸಭಾ ಕ್ಷೇತ್ರ, ನಗರದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಜಿಲ್ಲಾ ಕೇಂದ್ರದಲ್ಲಿ ಕನ್ನಡದ ಧ್ವಜ ಹಾರಿಸಲು ಬಿಡುತ್ತಿಲ್ಲ. ಪೊಲೀಸರು ಮನೆ ಮನೆಗೆ ತೆರಳಿ ಕನ್ನಡದ ಬಾವುಟ ತೆರವುಗೊಳಿಸುತ್ತಿದ್ದಾರೆ. ಇವರ ಮೇಲೆ ಆಡಳಿತ ಪಕ್ಷದ ರಾಜಕಾರಣಿಗಳ ಒತ್ತಡ ಎಷ್ಟಿರಬಹುದು ಎಂದು ಕಿಡಿ ಕಾರಿದ್ದಾರೆ. ಬೆಳಗಾವಿ ಕನ್ನಡಿಗರ ಪಾಲಿಗೆ ಬಿಜೆಪಿ ಎಂಇಎಸ್ ಅವರಿಗಿಂತ ಅಪಾಯಕಾರಿ ಎಂದಿದ್ದಾರೆ.