ವಿವಾದಗಳ ನಡುವೆ ಇಂದಿನಿಂದ 3 ದಿನ ಸಾಹಿತ್ಯ ಜಾತ್ರೆ

123

ಪ್ರಜಾಸ್ತ್ರ ಸುದ್ದಿ

ಹಾವೇರಿ: ಏಲಕ್ಕಿ ನಗರಿ ಹಾವೇರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಾಹಿತ್ಯದ ಜಾತ್ರೆ ನಡೆಯಲಿದೆ. ಮುಂಜಾನೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದಾರೆ.

ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರು ಸರ್ವಾಧ್ಯಕ್ಷರಾಗಿದ್ದು, ಅವರ ಭವ್ಯ ಮೆರವಣಿಗೆ ನಡೆಯುತ್ತಿದೆ. ಶ್ರೀ ಪುಸಿಸಿದ್ದೇಶ್ವರ ದೇವಸ್ಥಾನದಿಂದ ಸಮ್ಮೇಳನದ ವೇದಿಕೆವರೆಗೂ ಮೆರವಣಿಗೆ ನಡೆಯಲಿದೆ. ಸಮ್ಮೇಳನಾಧ್ಯಕ್ಷರು 45 ನಿಮಿಷ ತಮ್ಮ ಭಾಷಣ ಮಾಡಲಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಅಧಿಕಾರಿಗಳು, ಸಾಹಿತಿಗಳು ಈ ವೇಳೆ ಉಪಸ್ಥಿತ ಇರಲಿದ್ದಾರೆ. ಸಾಕಷ್ಟು ವಿವಾದಗಳ ನಡುವೆ ಸಮ್ಮೇಳನ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!