ಸಿಂದಗಿಯಲ್ಲಿ ಡ್ರೈವರ್-ಓನರ್ಸ್ ವೆಲ್ಫೇರ್ ಶಾಖೆ ಉದ್ಘಾಟನೆ

439

ಸಿಂದಗಿ: ಪಟ್ಟಣದಲ್ಲಿಂದು ಕರ್ನಾಟಕ ಡ್ರೈವರ್ ಹಾಗೂ ಓನರ್ಸ್ ವೆಲ್ಫೇರ್ ಅಸೋಸಿಯೇಸನ್ ತಾಲೂಕು ಘಟಕ ಉದ್ಘಾಟನೆ ಮಾಡಲಾಯ್ತು. ಜ್ಯೋತಿ ನಗರದ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿದ್ದ ಆಯೋಜಿಸಿದ್ದ ಕಾರ್ಯಕ್ರಮವನ್ನ ಯಂಕಂಚಿಯ ಶ್ರೀ ಶಭ್ರ ಅಭಿನವರುದ್ರ ಶಿವಾಚಾರ್ಯರು ಹಾಗೂ ಬೋರಗಿಯ ಶ್ರೀ ತಪೋರತ್ನ ಮಹಾಲಿಂಗೇಶ್ವರ ಸ್ವಾಮೀಜಿ ಅವರು ಜಂಟಿಯಾಗಿ ಉದ್ಘಾಟಿಸಿದ್ರು.

ಓದುಗರ ಗಮನಕ್ಕೆ

ಈ ವೇಳೆ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಸುಗಟೂರ ಮಾತ್ನಾಡಿ, ಸಾಮಾಜಿಕ ಕ್ಷೇತ್ರಗಳಲ್ಲಿ ಚಾಲಕರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಅಂತಾ ಹೇಳಿದ್ರು. ಅಲ್ದೇ ಊರಿಂದ ಊರಿಗೆ ಕೆಲಸ ಮಾಡುವ ಟೈಂನಲ್ಲಿ ಯಾವುದೇ ಕೆಟ್ಟ ಚಟಗಳಿಗೆ ದಾಸರಾಗಬಾರದು ಅಂತಾ ಸಲಹೆ ನೀಡಿದ್ರು. ಇದೇ ವೇಳೆ ತಾಲೂಕು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕ ಮಾಡಲಾಯ್ತು.

ಶಿವಾಜಿ ಮೆಟಗಾರ, ಶ್ರೀನಾಥ ಪೂಜಾರಿ, ಮಲ್ಲು ನಾಟೀಕಾರ, ನಿಂಗು ಬಗಲಿ, ಕಾಜು ಬಂಕಲಗಿ, ಸುದರ್ಶನ ಜಿಂಗಾಣಿ, ನಿಂಗರಾಜ ಅತ್ನೂರ ಸೇರಿ ಅನೇಕರು ಉಪಸ್ಥಿತರಿದ್ರು. ಹರ್ಷವರ್ಧನ ಪೂಜಾರಿ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!