ಪ್ರಜಾಸ್ತ್ರ ಸುದ್ದಿ
ಧಾರವಾಡ: ಇಲ್ಲಿನ ನೆಹರು ನಗರದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ವಿಶೇಷವಾಗಿ ಪೂಜೆ ಸಲ್ಲಿಸಲಾಗಿದೆ. ಕಾರ್ತಿಕಮಾಸದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಆಂಜನಯನಿಗೆ ವಿಭಿನ್ನವಾಗಿ ಅಲಂಕಾರ ಮಾಡಿ ಪೂಜೆ ಮಾಡಲಾಗಿದೆ.
ತುಮಕೂರು ಮೂಲದ ಸುಗರೇಶ್ವರ ಎಸ್.ಬಿ ಅನ್ನೋ ಪೂಜಾರಿ ಮಾರುತಿಗೆ 119 ಬಗೆಯ ಅಲಂಕಾರಗಳಿಂದ ಶೃಂಗರಿಸಿ ಪೂಜೆ ಸಲ್ಲಿಕೊಂಡು ಬಂದಿದ್ದಾರೆ. ಒಂದೊಂದು ರೀತಿಯ ಅಲಂಕಾರವೂ ಭಕ್ತರ ಕಣ್ಮನ ಸೆಳೆದಿದೆ. ಈ ಪೂಜಾ ಕೈಂಕರ್ಯದಲ್ಲಿ ನೆಹರು ನಗರ ನಿವಾಸಿಗಳು, ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.