ಬೆಂಗಳೂರು: 2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು, ಸಾಹಿತಿ ಚಂದ್ರಶೇಖರ ಪಾಟೀಲ ಸೇರಿದಂತೆ 70 ಜನ ಸಾಧಕರಿಗೆ ಬಿಬಿಎಂಪಿ ಈ ಬಾರಿ ಪ್ರಶಸ್ತಿ ನೀಡ್ತಿದೆ. ಸೆಪ್ಟೆಂಬರ್ 4ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ನಿವೃತ ನ್ಯಾಯಮೂರ್ತಿ ಸದಾಶಿವ ನೇತೃತ್ವದ ಸಮಿತಿ ಸಾಹಿತಿ ಚಂಪಾ, ಅಬ್ದುಲ ಬಷೀರ, ಮುಖ್ಯಮಂತ್ರಿ ಚಂದ್ರು, ಬಿಂದುರಾಣಿ, ಡಿ.ರೂಪಾ, ಮಂಜುಳಾ ಗುರುರಾಜ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 70 ಜನರನ್ನ ಆಯ್ಕೆ ಮಾಡಲಾಗಿದೆ.
ನಾಳೆ ಡಾ.ರಾಜಕುಮಾರ ಗಾಜಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಕೆಂಪೇಗೌಡರ ಪ್ರತಿಮೆ ಹಾಗೂ 25 ಸಾವಿರ ರೂಪಾಯಿ ನಗದು ಹೊಂದಿದೆ.