ಗೋಕುಲಾಷ್ಟಮಿಯಲ್ಲಿ ಚಿಣ್ಣರ ಕಲರವ

315

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಡ್ರೀಮ್ ವರ್ಲ್ಡ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಶುಕ್ರವಾರ ಆಚರಿಸಲಾಯಿತು. ಬಾಲ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಕ್ಕಳು ರಾಧಾ ಕೃಷ್ಣನ ವೇಷ ಧರಿಸಿ ಮುದ್ದು ಮುದ್ದಾಗಿ ಕಂಗೊಳಿಸಿದರು. ಇದೆ ವೇಳೆ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಹಾಗೂ ಮನರಂಜನೆ ಕಾರ್ಯಕ್ರಮಗಳು ನೋಡಗರ ಕಣ್ಮನ ಸೆಳೆದವು.

ರೇವಣ ಸಿದ್ದೇಶ್ವರ ಸಂಸ್ಥೆಯ ಕೆಂಚಪ್ಪ ಪೂಜಾರಿ, ಕನಕದಾಸ ಬಡಾವಣೆ ಸರಕಾರಿ ಶಾಲೆ ಮುಖ್ಯಗುರುಗಳಾದ ಜೆ.ಎಸ್ ಗೊಲಶೆಟ್ಟಿ, ರಾಂಪುರ ಶಾಲೆಯ ಪಿ. ಎ ಯಲೋಗೊಡ, ಜ್ಞಾನ ಭಾರತಿ ಶಾಲೆಯ ಪ್ರೇಮಾ.ಎನ್ ನಾಯ್ಕ,  ಪಾಲಕರ ಪ್ರತಿನಿಧಿಯಾದ ಶಿವು ಹಿರೇಕುರುಬರ ವೇದಿಕೆ ಹಂಚಿಕೊಂಡಿದ್ದರು.

ಪ್ರಶಾಂತ ಪೂಜಾರಿ ಸ್ವಾಗತಿಸಿದರು, ಪ್ರಿಯಾಂಕ ಪತ್ತಾರ, ಶೃತಿ ಕರಿಕಲ್ ಮನೆ, ಸಿದ್ದಮ್ಮ ಪೂಜಾರಿ ಅಂಜಲಿ ಪೂಜಾರಿ ಪ್ರಾರ್ಥನೆ ಗೀತೆ ಹಾಡಿದರು. ಮನೋಹರ ರೂಗಿ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!