ಕಲಬುರ್ಗಿ ಹತ್ಯೆ ಆರೋಪಿಗಳು ಕೋರ್ಟ್ ಗೆ ಹಾಜರು

343

ಧಾರವಾಡ: ಖ್ಯಾತ ಸಂಶೋಧಕ, ವಿದ್ವಾಂಸ ಡಾ.ಎಂ.ಎಂ ಕಲಬುರ್ಗಿ ಹತ್ಯೆ ಆರೋಪಿಗಳನ್ನ ಇಂದು ಧಾರವಾಡ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಆರು ಜನ ಆರೋಪಿಗಳಲ್ಲಿ ಐವರನ್ನ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

ಮೈಸೂರು, ಬೆಳಗಾವಿ, ಧಾರವಾಡ ಹಾಗೂ ಮುಂಬೈ ಜೈಲಿನಲ್ಲಿದ್ದ ಆರೋಪಿಗಳನ್ನ ಕೋರ್ಟ್ ಗೆ ಕರೆದುಕೊಂಡು ಬರಲಾಗಿದೆ. ಎಸ್ಐಟಿಯಿಂದ ಚಾರ್ಜ್ ಶೀಟ್ ಸಲ್ಲಿಕೆಯಾದ್ಮೇಲೆ ಇದೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆಗಸ್ಟ್ 17ರಂದು ಜಿಲ್ಲಾ ನ್ಯಾಯಾಲಯಕ್ಕೆ ಎಸ್ಐಟಿಯಿಂದ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.

ಆರೋಪಿಗಳಾದ ಗಣೇಶ ಮಿಸ್ಕಿನ್, ಅಮಿತ ಬದ್ದಿ, ಪ್ರವೀಣ ಚತುರ, ಶರದ ಕಳಾಸ್ಕರ ಹಾಗೂ ವಾಸುದೇವ ಸೂರ್ಯವಂಶಿಯನ್ನ ಕೋರ್ಟ್ ಗೆ ಹಾಜರು ಪಡಿಸಲಾಯ್ತು. ಬೆಂಗಳೂರು ಜೈಲಿನಲ್ಲಿರುವ ಅಮೂಲ ಕಾಳೆ ಅನಾರೋಗ್ಯದಿಂದ ಗೈರಾಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!