ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದೆ. ಈಗ ಕಾಂಗ್ರೆಸ್ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹಿರಿಯ ನಾಯಕ ಎಸ್.ಆರ್ ಪಾಟೀಲಗೆ ಸ್ಥಾನ ನೀಡಿಲ್ಲ. ಇದರಿಂದಾಗಿ ಬಾಗಲಕೋಟೆ ಭಾಗದಲ್ಲಿ ಅಸಮಾಧಾನ ಎದ್ದಿದೆ.
ಎಲ್ಲೆಲ್ಲಿ ಯಾರಿಗೆ ಟಿಕೆಟ್ ನೀಡಲಾಗಿದೆ ಅನ್ನೋದರ ಪಟ್ಟಿ ಹೀಗಿದೆ..
ಕಲಬುರಗಿ: ಶಿವಾನಂದ ಪಾಟೀಲ ಮರ್ತೂರು, ಬೆಳಗಾವಿ: ಚನ್ನರಾಜ ಬಸವರಾಜ ಹಟ್ಟಿಹೊಳಿ, ಉತ್ತರಕನ್ನಡ: ಭೀಮಣ್ಣ ನಾಯ್ಕ್, ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ: ಸಲೀಂ ಅಹಮದ್, ರಾಯಚೂರು: ಶರಣ ಗೌಡ ಅನ್ನದಾನ ಗೌಡ ಪಾಟೀಲ, ಚಿತ್ರದುರ್ಗ: ಬಿ. ಸೋಮಶೇಖರ್, ಶಿವಮೊಗ್ಗ: ಆರ್. ಪ್ರಸನ್ನಕುಮಾರ್, ದಕ್ಷಿಣಕನ್ನಡ: ಮಂಜುನಾಥ ಭಂಡಾರಿ, ಚಿಕ್ಕಮಗಳೂರು: ಎ.ವಿ. ಗಾಯತ್ರಿ ಶಾಂತೇಗೌಡ, ಹಾಸನ: ಎಂ. ಶಂಕರ್, ತುಮಕೂರು: ಆರ್. ರಾಜೇಂದ್ರ
ಮಂಡ್ಯ: ಎಂ.ಜಿ. ಗೂಳಿಗೌಡ (ದಿನೇಶ್ ಗೂಳಿಗೌಡ), ಬೆಂಗಳೂರು ಗ್ರಾಮಾಂತರ: ಎಸ್. ರವಿ, ಕೊಡಗು: ಡಾ.ಮಂಥರ್ ಗೌಡ, ವಿಜಯಪುರ-ಬಾಗಲಕೋಟೆ: ಸುನೀಲ್ ಗೌಡ ಪಾಟೀಲ, ಮೈಸೂರು-ಚಾಮರಾಜನಗರ: ಡಾ.ಡಿ. ತಮ್ಮಯ್ಯ, ಬಳ್ಳಾರಿ: ಕೆ.ಸಿ. ಕೊಂಡಯ್ಯ, ಬೀದರ್: ಭೀಮರಾವ್ ಬಿ. ಪಾಟೀಲ, ಕೋಲಾರ: ಎಂ.ಎಲ್. ಅನಿಲ್ಕುಮಾರ್, ಬೆಂಗಳೂರು ನಗರ: ಯೂಸುಫ್ ಷರೀಫ್