ಸಂಸತ್ ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ

443

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ಸೋಂಕಿನ ನಡುವೆಯೇ ಹಂತ ಹಂತವಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಇದೀಗ ಸೆಪ್ಟೆಂಬರ್ 14ರಿಂದ ಮಳೆಗಾಲದ ಅಧಿವೇಶನ ನಡೆಯಲಿದೆ ಎಂದು ಸರ್ಕಾರ ಪ್ರಕಟಿಸಿದೆ. ಯಾವುದೇ ರಜೆ ಇಲ್ಲದೆ ಅಕ್ಟೋಬರ್ 1ರ ತನಕ 18 ದಿನ ಅಧಿವೇಶನ ನಡೆಯಲಿದೆ.

ಸುರಕ್ಷಾ ನಿಯಮಗಳನ್ನ ಪಾಲಿಸಿಕೊಂಡು ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದ್ದು, ಕಲಾಪ ಆರಂಭಕ್ಕೂ 72 ಗಂಟೆ ಮೊದ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಲಾ 4 ಗಂಟೆಗಳ ಕಾಲ ಕಲಾಪ ನಡೆಸಲು ಉದ್ದೇಶಿಸಲಾಗಿದೆ. ಕಳೆದ 5 ತಿಂಗಳಲ್ಲಿ 11 ಸುಗ್ರೀವಾಜ್ಞೆಗಳನ್ನ ಹೊರಡಿಸಿದ್ದು, ಇವುಗಳಿಗೆ ಸಂಸತ್ತಿನ ಅನುಮೋದನೆ ಪಡೆಯುವುದು ಮುಖ್ಯವಾಗಿದೆ.

ಮಾರ್ಚ್ 23ರಂದು ಪ್ರಧಾನಿ ಮೋದಿ ಲಾಕ್ ಡೌನ್ ಘೋಷಣೆ ಮಾಡಿರುವುದ್ರಿಂದ ಅನಿಧಿರ್ಷಾವಧಿವರೆಗೂ ಅಧಿವೇಶನ ಮುಂದೂಡಲಾಗಿತ್ತು. ಇದೀಗ ಅದಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!