ಚಂದನದಲ್ಲಿ ‘ಮೂಕನಾಗಬೇಕು’ ಸಾಕ್ಷ್ಯಚಿತ್ರ ಪ್ರಸಾರ

387

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಉತ್ತರ ಕರ್ನಾಟಕ ಭಾಗದ ಮಹಾನ್ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಕುರಿತಾದ ‘ಮೂಕನಾಗಬೇಕು’ ಅನ್ನೋ ಸಾಕ್ಷ್ಯಚಿತ್ರ ಭಾನುವಾರ ಸಂಜೆ 5 ಗಂಟೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಶಿವಾನಂದ ಹಿರೇಮಠ ಇದನ್ನು ನಿರ್ದೇಶನ ಮಾಡಿದ್ದಾರೆ. ಹೊಂಗನಸು ಮೀಡಿಯಾ ಪ್ರೈವೆಟ್ ಲಿಮಿಟೆಡ್ ಅಡಿಯಲ್ಲಿ ಬಾಗಲಕೋಟೆಯ ರಾಜೂ ವಿ ನಾಯ್ಕರ ನಿರ್ಮಾಣ ಮಾಡಿದ್ದಾರೆ. ನಟ, ರಂಗಕರ್ಮಿ ಸಂತೋಷ್ ಉಪ್ಪಿನ್ ಕಡಕೋಳ ಮಡಿವಾಳಪ್ಪನವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಕಲಾವಿದರು, ತಂತ್ರಜ್ಞರು ಕೂಡಿಕೊಂಡು ಈ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಸೆಪ್ಟೆಂಬರ್ 17ರ ಸಂಜೆ 5 ಗಂಟೆಗೆ ಚಂದನದಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!