ಬರ್ತ್ ಡೇ ದಿನವೇ ಮುಹೂರ್ತವಿಟ್ಟರು.. ಬೆಳಗಿನ ಜಾವ ಫಿನಿಶ್ ಆದ ಬಿಜೆಪಿ ಲೀಡರ್..

933

ಮೈಸೂರು: ಇಂದು ಬೆಳಗಿನ ಜಾವ ಬಿಜೆಪಿ ಲೀಡರ್ ನ ಮರ್ಡರ್ ಆಗಿದೆ. ಆನಂದ ಅಲಿಯಾಸ್ ವಡ್ಡ ಆನಂದ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಕೊಲೆಯಾದವನು ರೌಡಿ ಶೀಟರ್ ಆಗಿದ್ದು, ನಗರದ ಸರಸ್ವತಿಪುರಂನಲ್ಲಿ ಈತನ ಮೇಲೆ ರೌಡಿ ಶೀಟರ್ ಓಪನ್ ಮಾಡಲಾಗಿತ್ತು.

ನಿನ್ನೆ ಈತನ ಹುಟ್ಟು ಹಬ್ಬವಿತ್ತು. ಹೀಗಾಗಿ ಕುವೆಂಪು ನಗರದ ಲವಕುಶ ಪಾರ್ಕ ಹತ್ತಿರದ ಸರ್ಮಿಸ್ ಅಪಾರ್ಟ್ ಮೆಂಟ್ ನಲ್ಲಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಪಾರ್ಟಿ ವೇಳೆ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದೆ. ಆಗ ಬಿಯರ್ ಬಾಟಲ್ ತೆಗೆದುಕೊಂಡು ಆನಂದಗೆ ಮನಸ್ಸೋಇಚ್ಛೆ ಇರಿದು ಹತ್ಯೆ ಮಾಡಲಾಗಿದೆ.

ಕೊಲೆಯಾದ ಆನಂದ ಇಲ್ಲಿಗೆ ಬರುವುದಕ್ಕೂ ಮೊದ್ಲೇ ಉತ್ತರಹಳ್ಳಿ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿಕೊಂಡು ಬಂದಿದ್ದನಂತೆ. ಬಳಿಕ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾನೆ. ಈ ವೇಳೆ ಗಲಾಟೆ ನಡೆದು ಹತ್ಯೆ ಮಾಡಲಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಆನಂದ, ಈ ಹಿಂದೆ ಜನತಾ ನಗರದ ಮಾರುತಿ ಟೆಂಟ್ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನನ್ನ ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಬಳಿಕ ರಾಜಕೀಯ, ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸ್ತಿದ್ದ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು ತನಿಖೆ ನಡೆಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!