ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಮುರುಘಾಮಠದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ನಡೆದಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಸ್.ಕೆ ಬಸವರಾಜನ್ ಅವರ ಪತ್ನಿ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸೌಭಾಗ್ಯ ಅವರನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ.
ನವೆಂಬರ್ 9ರಂದು ಬಸವರಾಜನ್ ಹಾಗೂ ಸೌಭಾಗ್ಯ ವಿರುದ್ಧ ದೂರು ದಾಖಲಾಗಿತ್ತು. ನವೆಂಬರ್ 10ರಂದು ಬಸವರಾಜನ್ ಬಂಧಿಸಲಾಗಿತ್ತು. ಸೌಭಾಗ್ಯ ತಲೆಮರೆಸಿಕೊಂಡಿದ್ದರು. ಗ್ರಾಮಾಂತರ ಠಾಣೆ ಪೊಲೀಸರು ಡಿಸೆಂಬರ್ 15ರ ತಡರಾತ್ರಿ ಬಂಧಿಸಿದ್ದು, ಇಂದು ಕೋರ್ಟಿಗೆ ಹಾಜರು ಪಡೆಸಲಿದ್ದಾರೆ.