ಬೆಂಗಳೂರು: ನಾತಿಚರಾಮಿ ಚಿತ್ರದ ವಿರುದ್ಧ ನಿರ್ದೇಶಕ ದಯಾಳ್ ಪದ್ಮನಾಭನ್ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಐದು ಪ್ರಶಸ್ತಿಗಳನ್ನ ಬಾಚಿಕೊಂಡಿರುವ ಸಿನಿಮಾದ ವಿರುದ್ಧ ನಿರ್ದೇಶಕರೊಬ್ಬರು ಗರಂ ಆಗಿದ್ದಾರೆ. ಪ್ರಾದೇಶಿಕ ಸಿನಿಮಾ ಆಯ್ಕೆಗಾರರ ಸಮಿತಿಯಲ್ಲಿ ನಿರ್ದೇಶಕ ಬಿ.ಎಸ್ ಲಿಂಗದೇವರು ಇದ್ದಾರೆ.
ಇವರು ಸಿನಿಮಾದ ಸಂಕಲನ ಕಾರ್ಯ ನಡೆದಿರುವ ಅಕ್ಕ ಕಮ್ಯೂನಿಕೇಷನ್ ಪ್ರೈವೆಟ್.ಲಿಂ ಅನ್ನೋ ಕಂಪನಿ ಜೊತೆ ನಂಟು ಹೊಂದಿದ್ದಾರೆ ಎಂದು ದಯಾಳ್ ಪದ್ಮನಾಭನ್ ಹೇಳ್ತಿದ್ದಾರೆ.
ಈ ಬಗ್ಗೆ ಸಿನಿಮೋತ್ಸವ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಬಿ.ಎಸ್ ಲಿಂಗದೇವರು ಅವರು ಅಕ್ಕ ಕಮ್ಯೂನಿಕೇಷನ ಪ್ರೈವೆಟ್ ಲಿಂ ಕಂಪನಿಯ ನಿರ್ದೇಶಕರಲ್ಲಿ ಒಬ್ಬರು. ಇದು ಪ್ರಶಸ್ತಿ ನೀಡುವಲ್ಲಿ ಪ್ರಭಾವ ಬೀರಿದೆ ಎಂದು ದಯಾಳ್ ಪದ್ಮನಾಭನ್ ಆರೋಪಿಸಿದ್ದಾರೆ.