ರಾಜ್ಯ ಬಿಜೆಪಿ ನೂತನ ಸಾರಥಿಗೆ ಅಧಿಕಾರ ಹಸ್ತಾಂತರ

383

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರಿಗೆ ನಿರ್ಗಮಿತ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಅಧಿಕಾರ ಹಸ್ತಾಂತರ ಮಾಡಿದ್ರು. ನಗರದ ಮಲ್ಲೇಶ್ವರಂದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟೀಲ ಅಧಿಕಾರಿ ವಹಿಸಿಕೊಂಡ್ರು.

ಅಧಿಕಾರಿ ಸ್ವೀಕರಿಸಿ ಮಾತ್ನಾಡಿದ ಕಟೀಲ, ನಾನೊಬ್ಬ ಆರ್ ಎಸ್ಎಸ್ ನ ನಿಷ್ಟಾವಂತ ಕಾರ್ಯಕರ್ತ. ಸಾಮಾನ್ಯ ಕುಟುಂಬದಿಂದ ಬಂದ ನನ್ನನ್ನು ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಆರ್ ಎಸ್ಎಸ್ ಗೆ ಋಣಿಯಾಗಿರುತ್ತೇನೆ ಎಂದರು. ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು ಎಂಬುವುದಕ್ಕೆ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಹಾಗೂ ನಾನೇ ಉದಾಹರಣೆ ಅಂತಾ ಹೇಳಿದ್ರು.

ಇದೆ ವೇಳೆ ಮಾತ್ನಾಡಿದ ನಿರ್ಗಮಿತ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮುಂದಿನ ವಿಧಾನಸಭೆ ಅತ್ಯಂತ ಪ್ರತಿಷ್ಠೆಯಾಗಿದೆ. ಭಾರೀ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯಲು ಕಾರ್ಯಕರ್ತರು ಸಜ್ಜಾಗಬೇಕೆಂದು ಕರೆ ನೀಡಿದ್ರು. ಕಾಂಗ್ರೆಸ್-ಜೆಡಿಎಸ್ ಅಧಿಕಾರದಲ್ಲಿದ್ದಾಗ 25 ಎಂಪಿ ಸ್ಥಾನಗಳನ್ನ ಗೆದ್ದಿದ್ದು ದಾಖಲೆ. ನಿಮ್ಮ ಜೊತೆ ದೊಡ್ಡ ಕಾರ್ಯಕರ್ತರ ದಂಡೆ ಕೈಜೋಡಿಸಲಿದೆ ಎಂದು ನೂತನ ರಾಜ್ಯಾಧ್ಯಕ್ಷರಿಗೆ ಧೈರ್ಯ ತುಂಬಿದ್ರು.




Leave a Reply

Your email address will not be published. Required fields are marked *

error: Content is protected !!