ಬೆಳಗಾವಿ: ಮಹಾರಾಷ್ಟ್ರದಿಂದ ಬರುವ ವಾಹನಗಳಿಗೆ ರಾಜ್ಯಕ್ಕೆ ನಿರ್ಬಂಧ ಹೇರಿರುವ ಕಾರಣ, ನಿಪ್ಪಾಣಿಯ ಕೂಗುನೊಳ್ಳಿ ಚೆಕ್ ಪೋಸ್ಟ್ ಬಳಿ ಕನ್ನಡಿಗರು ಸಿಲುಕಿ ಹಾಕಿಕೊಂಡಿದ್ದಾರೆ. ಅಲ್ಲಿಂದ ಪಾಸ್ ಪಡೆದು ಬಂದು ಇಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
ಹಾಸನ ಮೂಲದ ವಲಸೆ ಕಾರ್ಮಿಕರು, ತಮ್ಮನ್ನ ಕರ್ನಾಟಕದೊಳಗೆ ಬಿಡುತ್ತಿಲ್ಲವೆಂದು ಅಳಲೊತ್ತುಕೊಂಡಿದ್ದಾರೆ. ನವ್ಯಾರೂ ಕಳ್ಳತನ ಮಾಡಿಲ್ಲ. ಅರಾಧಿಗಳಲ್ಲ. 30 ಜನರಲ್ಲಿ ಅಂಗವಿಕಲರು, ಮಕ್ಕಳು, ಹಿರಿಯರು, ಹಾರ್ಟ್ ಪೇಸೆಂಟ್, ಶುಗುರ್, ಪೇಸೆಂಟ್ ಎಲ್ಲ ಇದ್ದಾರೆ. ಇಷ್ಟು ದಿನ ಇರೋ ಹಣದಲ್ಲಿ ಔಷಧಿ ಖರೀದಿಸಿ ಹೇಗೋ ಜೀವನ ಮಾಡಿದೀವಿ. ಈಗ ಹಣವೂ ಇಲ್ಲ. ಕೆಲಸವೂ ಇಲ್ಲ. ವಾಪಸ್ ಊರಿಗೆ ಹೋಗಲು ಬಿಡಿಯೆಂದು ಕಣ್ಣೀರು ಹಾಕ್ತಿದ್ದಾರೆ.
ಹಾಸನ ಡಿಸಿ ಒಪ್ಪಿಗೆ ನೀಡುತ್ತಿಲ್ಲವಂತೆ. ನಾಳೆ ಕರೆಸಿಕೊಳ್ಳುತ್ತೇವೆ ಎಂದು ಹೇಳ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಇಲ್ಲೇ ಇದ್ದೇವೆ. ನೀರಿಲ್ಲ, ಊಟವಿಲ್ಲ. ನಮ್ಗೆ ಕ್ವಾರಂಟೈನ್ ಮಾಡಿ, ಚೆಕ್ ಮಾಡಿ. ಆದ್ರೆ, ಊರಿಗೆ ಹೋಗಲು ಬಿಡಿಯೆಂದು ವಲಸೆ ಕಾರ್ಮಿಕರು ಅಂಗಲಾಚುತ್ತಿದ್ದಾರೆ. ಇಂಥಾ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೂ ಸಹ ಏನು ಮಾಡಬೇಕೆಂದು ತೋಚುತ್ತಿಲ್ಲ.