ಪ್ರಜಾಸ್ತ್ರ ಸುದ್ದಿ
ಸಹರಾನಪುರ: ಲೋಕಸಭೆ ಚುನಾವಣೆ ನಿಮಿತ್ತ ಪ್ರಧಾನಿ ಮೋದಿ ಉತ್ತರ ಪ್ರದೇಶದ ಸಹರಾನಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ 370ಕ್ಕೂ ಹೆಚ್ಚು ಸ್ಥಾನ ಗಳಿಸುವುದನ್ನು ತಡೆಯುವುದಾಗಿದೆ. ಇಂಡಿಯಾ ಮೈತ್ರಿಕೂಟ ಕಮಿಷನ್ ಗಳಿಸುವ ಗುರಿ ಹೊಂದಿದೆ ಎಂದು ವಾಗ್ದಾಳಿ ನಡೆಸಿದರು.
ಎನ್ ಡಿಎ ಮೈತ್ರಿಗೆ ಮಿಷನ್ ಗುರಿಯಿದೆ. ಇಂಡಿಯಾ ಮೈತ್ರಿಗೆ ಕಮಿಷನ್ ಗುರಿ ಇದೆ. ಕಾಂಗ್ರೆಸ್ಸಿಗೆ ಅಭ್ಯರ್ಥಿಗಳೇ ಇಲ್ಲ. ಎಸ್ಪಿ ಪಕ್ಷ ಪ್ರತಿ ಗಂಟೆಗೊಮ್ಮೆ ಅಭ್ಯರ್ಥಿ ಬದಲಿಸುತ್ತೆ. ಹೀಗಾಗಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಧೈರ್ಯ ಇವರಿಗಿಲ್ಲ ಎಂದರು.