ಸಿಎಂಗಳ ಜೊತೆ ಮೋದಿ 4ನೇ ಸಂವಾದ

350

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಸಿಎಂಗಳು ಜೊತೆಗೆ ನಾಲ್ಕನೇ ಬಾರಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. 9 ರಾಜ್ಯಗಳ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫ್ ರೆನ್ಸ್ ನಲ್ಲಿ ಭಾಗವಹಿಸಿದ್ದು, ಕೇರಳ ಸಿಎಂ ಪಿಣರಾಯಿ ವಿಜಯನ್ ಗೈರಾಗಿದ್ದಾರೆ. ಅವರು ಬದಲು ಸರ್ಕಾರದ ಕಾರ್ಯದರ್ಶಿ ಭಾಗವಹಿಸಿದ್ದು, ಲಿಖಿತ ರೂಪದಲ್ಲಿ ವರದಿ ನೀಡಲಿದ್ದಾರೆ.

ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವ ಕುರಿತು ಮಾತ್ನಾಡಿದ್ದಾರೆ. ಪ್ರಧಾನಿ ಎದುರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಮೇಘಾಲಯ ಸಿಎಂ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮಾತ್ನಾಡಿದ್ದಾರೆ.

ಹೀಗಾಗಿ ಈ ವಿಡಿಯೋ ಸಂವಾದ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಯಾವೆಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವ, ತೆಗೆದು ಹಾಕುವ, ಸಡಿಲಿಕೆ ಮಾಡುವ ಕುರಿತು ಇನ್ನಷ್ಟು ಮಾಹಿತಿ ಬರಬೇಕಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಏನು ಹೇಳಿದ್ದಾರೆ ಅನ್ನೋದು ಸಧ್ಯದಲ್ಲಿಯೇ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!