ಪ್ರಜಾಸ್ತ್ರ ‘ಬುಕ್ ಸ್ಟೋರ್’ನಲ್ಲಿ…

445

ಬರಹ, ಕಾವ್ಯ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಯುವ ಬರಹಗಾರರ ಹೊಸ ಕೃತಿಗಳ ಕಿರು ಮಾಹಿತಿ ಪ್ರಜಾಸ್ತ್ರ ‘ಬುಕ್ ಸ್ಟೋರಿ’ನಲ್ಲಿ…

ರಂಗಭೂಮಿ, ಸಿನಿಮಾ ಹಾಗೂ ಸಾಹಿತ್ಯದ ಜೊತೆಗೆ ನಂಟು ಹೊಂದಿರುವ ಯುವ ಬರಹಗಾರ ಶಿಶಿರ ಅವರ ಎರಡು ಕೃತಿಗಳು ಇತ್ತೀಚೆಗೆ ಮೈಸೂರಿನಲ್ಲಿ ಬಿಡುಗಡೆಗೊಂಡಿವೆ. ಸ್ಕಂದ ಪ್ರಕಾಶ ಪ್ರಕಟಿಸಿರುವ ‘ಲಂಕೇಶನ ತಲೆಗಳು’ ಖಂಡಕಾವ್ಯ ಹಾಗೂ ಶಾಲ್ಮಲ ಪ್ರಕಾಶನ ಹೊರ ತಂದಿರುವ ‘ಅವ್ವ’ ಹನಿಗವಿತೆಗಳ ಕೃತಿ ಓದುಗರಿಗೆ ಹತ್ತಿರವಾಗ್ತಿವೆ.

ಶಿಶಿರ ಹೆಸರಿನ ಮೂಲಕ ಗುರುತಿಸಿಕೊಂಡಿರುವ ಎಸ್.ಶಿಶಿರಂಜನ ಅವರು 2015ರಲ್ಲಿ ಬರೆದ ‘ಇದೆಂಥಾ ದೇಶಪ್ರೇಮಾ ರೀ?’ ಅನ್ನೋ ಕೃತಿಯ ಮೂಲಕ ಬೆಳಕಿಗೆ ಬಂದವರು. ಇದು ರಂಗರೂಪಗೊಂಡು ಹಲವು ಯಶಸ್ವಿ ಪ್ರದರ್ಶನಗಳನ್ನ ಕಂಡಿದೆ. ಸಾಹಿತ್ಯ ಹಾಗೂ ರಂಗಭೂಮಿಯ ತುಡಿತ ಇರುವ ಸೃಜಶೀಲ ಯುವ ಲೇಖಕರಲ್ಲಿ ಒಬ್ಬರಾಗಿ ಗುರುತಿಸಿಕೊಳ್ತಿದ್ದಾರೆ.

ಕೃತಿಗಳ ಖರೀದಿಗಾಗಿ: ‘ಲಂಕೇಶನ ತಲೆಗಳು’, ಸ್ಕಂದ ಪ್ರಕಾಶನ, #112, ಸ್ಕಂದ, ಪುಟ್ಟಸ್ವಾಮಿ ಶಾಲೆ ರಸ್ತೆ, ಬಿ ಬ್ಲಾಕ್, ಜೆ.ಪಿ ನಗರ ಮೈಸೂರು-570031 (9844662717)

‘ಅವ್ವ’ ಕೃತಿಗಾಗಿ: ಶಾಲ್ಮಲ ಪ್ರಕಾಶನ, #247, 7ನೇ ಅಡ್ಡ ರಸ್ತೆ, ಆನಂದಗಿರಿ ಬಡವಾಣೆ, ಎಸ್.ಎಸ್.ಎ ರಸ್ತೆ, ಆರ್.ಟಿ ನಗರ, ಬೆಂಗಳೂರು-560032 (9986497533)




Leave a Reply

Your email address will not be published. Required fields are marked *

error: Content is protected !!