ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಟ, ನಿರ್ದೇಶಕ, ರಾಜಕಾರಣಿ ಉಪೇಂದ್ರ ಅವರು ಸ್ಥಾಪನೆ ಮಾಡಿರುವ ಪ್ರಜಾಕೀಯ ಪಕ್ಷದ ಚಿಹ್ನೆ ಆಟೋ ನೀಡಲಾಗಿದೆ. ಚುನಾವಣಾ ಆಯೋಗ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆ ನೀಡಿದೆ. ಈ ಕುರಿತು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 18, 2018ರಂದು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಜಾಕೀಯ ಅನ್ನೋ ಪಕ್ಷವನ್ನು ಘೋಷಣೆ ಮಾಡಿದರು. ಇದಕ್ಕೂ ಮೊದಲು 2013ರಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಮುಲಕ ರಾಜಕೀಯ ಶುರು ಮಾಡಿದರು. ಮುಂದೆ ತಮ್ಮದೆ ಹೊಸ ಪಕ್ಷ ಸ್ಥಾಪಿಸಿದರು.
2023ರ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ಪ್ರತಿಯೊಂದು ಪಕ್ಷಗಳು ಸಮಾವೇಶ, ರ್ಯಾಲಿಗಳನ್ನು ನಡೆಸಿವೆ. ಕೇಂದ್ರ ನಾಯಕರು ಬಂದು ಹೋಗುತ್ತಿದ್ದಾರೆ. ಈ ಬಾರಿ ಆಪ್, ರವಿಕೃಷ್ಣ ರೆಡ್ಡಿ ಅವರ ಕೆಆರ್ ಎಸ್, ಜರ್ನಾಧನ್ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಪ್ರಜಾಕೀಯ ಸೇರಿ ಹೊಸ ಪಕ್ಷಗಳು ಎಷ್ಟು ಕಡೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಾರೆ ಅನ್ನೋ ಕುತೂಹಲವಿದೆ. ಜೊತೆಗೆ ಹೊಸ ಪಕ್ಷಗಳಿಗೆ ಜನರು ಮತ ನೀಡುತ್ತಾರಾ ಕಾದು ನೋಡಬೇಕಿದೆ.