ವಿಜಯಪುರದಲ್ಲಿ ಪ್ರತಿಭಟನೆ: ಪೊಲೀಸ್ ವಶಕ್ಕೆ ವಾಟಾಳ್, ಸಾರಾ

319

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಶಾಸಕ ಯತ್ನಾಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ವಾಟಾಳ್ ನಾಗರಾಜ ಹಾಗೂ ಸಾ.ರಾ ಗೋವಿಂದ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯತ್ನಾಳ ವಿರುದ್ಧ ಪ್ರತಿಭಟನೆಗೆ ಬರುತ್ತಿದ್ದಾಗ ದಾರಿ ಮಧ್ಯೆಯೇ ವಶಕ್ಕೆ ಪಡೆಯಲಾಗಿದೆ.

ನಿಡಗುಂದಿ ತಾಲೂಕಿನ ಯಲಗೂರ ಕ್ರಾಸ್ ಬಳಿ ವಾಟಾಳ್ ನಾಗರಾಜ, ಸಾ.ರಾ ಗೋವಿಂದ ಸೇರಿದಂತೆ 15 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಯತ್ನಾಳ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ್ದಾರೆ.

ಮುಖ್ಯಮಂತ್ರಿ ಬಿಎಸ್ವೈ ಸರ್ಕಾರ ಗೂಂಡಾತನದಿಂದ ಕೂಡಿದೆ. ನನ್ನ ಜೀವಮಾನದಲ್ಲಿಯೇ ಇಷ್ಟು ದೂರದಲ್ಲಿ ಬಂಧಿಸಿರುವುದು ಕಂಡಿಲ್ಲ. ಶಾಸಕ ಯತ್ನಾಳ ನಾಯಿ ಇದ್ದಂತೆ ಎಂದು ವಾಟಾಳ್ ನಾಗರಾಜ ಕಿಡಿಕಾರಿದ್ದಾರೆ




Leave a Reply

Your email address will not be published. Required fields are marked *

error: Content is protected !!