ಹುಬ್ಬಳ್ಳಿ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಅಸಂತಾಪೂರ ಗ್ರಾಮದ ವಿದ್ಯಾರ್ಥಿನಿ ರೇಣುಕಾ ಮಾದರ ಪ್ರಕರಣವನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತರಲಾಯ್ತು. ಪ್ರಕರಣದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ, ಕರ್ನಾಟಕ ದಲಿತ ವಿಮೋಚನೆ ಸಮಿತಿ ವತಿಯಿಂದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯ್ತು.
ರೇಣುಕಾಳ ಮೇಲೆ ಸೆಪ್ಟೆಂಬರ್ 19ರಂದು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಅಪರಾಧವನ್ನ ಕೂಡಲೇ ಪತ್ತೆ ಮಾಡಬೇಕು. ಯುವತಿ ಕುಟುಂಬಕ್ಕೆ ರಾಜ್ಯ ಸರ್ಕಾರ 20 ಲಕ್ಷ ರೂಪಾಯಿ ಧನ ಸಹಾಯ, 4 ಎಕರೆ ಜಮೀನು ಹಾಗೂ ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಸುರೇಶ ಖಾನಾಪೂರ, ಕೆಂಚಪ್ಪ ಮಲ್ಲಮ್ಮನವರ, ಬಸಪ್ಪ ಶಿವಣ್ಣನವರ, ವೀರಾಪೂರ, ರೇವಣಸಿದ್ದಪ್ಪ ಗುತ್ತಲ ಸೇರಿದಂತೆ ಅನೇಕರು ಇದ್ದರು.