ಮಹಿಳೆಯರನ್ನ ಶಬರಿಮಲೆಗೆ ನುಗ್ಗಿಸುವ ಪ್ರಯತ್ನ ಯಾಕೆ?

398

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಚಾಲನೆಗೆ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪನವರು ಮಾಡಿದ್ರು. ಈ ವೇಳೆ ಮಾತ್ನಾಡಿದ ಅವರು, ಮಹಿಳೆಯರನ್ನ ಶಬರಿಮಲೆಗೆ ನುಗ್ಗಿಸುವ ಪ್ರಸಂಗವನ್ನ ಪ್ರಗತಿಪರರು ಯಾಕೆ ಮಾಡಬೇಕೆಂದು ಪ್ರಶ್ನಿಸಿದ್ರು.

ಕೆಲ ಪ್ರಗತಿಪರರು, ಕಮ್ಯೂನಿಸ್ಟ್ ಗಳು ನಾಲ್ಕು ಜನ ಮಹಿಳೆಯರನ್ನ ನುಗ್ಗಿಸುವ ಕೆಲಸ ಮಾಡಿದ್ರು. ಶಬರಿಮಲೆಗೆ 10 ವರ್ಷದ ಒಳಗಿನ 54 ವರ್ಷದ ಮೇಲಿನ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಆದ್ರೆ, ನಾಲ್ವರು ಮಹಿಳೆಯರನ್ನ ನುಗ್ಗಿಸುವ ಕೆಲಸವನ್ನ ಕೆಲ ಪ್ರಗತಿಪರರು ಯಾಕೆ ಮಾಡಬೇಕೆಂದು ಪಶ್ನಿಸಿದ್ರು.

ಬಸವಣ್ಣ ನಿಜವಾದ ಸಮಾಜ ಸುಧಾರಕ. ಪ್ರತಿಯೊಬ್ಬರಲ್ಲಿ ಇಷ್ಟ ದೇವರು ಇದ್ದಾರೆ. ಇದನ್ನ ಅವರು ಒಪ್ಪಿಕೊಂಡಿದ್ರು. ಬಸವಣ್ಣರ ಕಾಲದಲ್ಲಿ ಸಮಾಜ ಬದಲಾವಣೆಯಾಗಲು ಪಕ್ವವಾಗಿರ್ಲಿಲ್ಲ. ಈಗ ಶಿಕ್ಷದಿಂದ ಸಮಾಜದಲ್ಲಿ ಪಕ್ವತೆ ಬಂದಿದೆ ಅಂತಾ ಎಸ್.ಎಲ್ ಭೈರಪ್ಪ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!