ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ಯುವ ಲೇಖಕರಾದ ಡಾ.ಸತ್ಯಮಂಗಲ ಮಹಾದೇವ ಅವರ ಪಂಚವರ್ಣದ ಹಂಸ ಕೃತಿಗೆ ಸಂವಹನ ಸಿರಿ ಪ್ರಶಸ್ತಿ ದೊರೆತಿದೆ. ಈಗಾಗ್ಲೇ ಈ ಕವನ ಸಂಕಲನ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು, ಅದಕ್ಕೆ ಮತ್ತೊಂದು ಗರಿ ಮುಡಿಗೇರಿದೆ.
ನವೆಂಬರ್ 28ರಂದು ಭಾನುವಾರ ಸಂಜೆ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೆ ವೇಳೆ ನಾಡಿನ ಖ್ಯಾತ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಗೌರವಿಸಲಾಗುತ್ತಿದೆ. ಸಂವಹನ ಟ್ರಸ್ಟ್ ಪ್ರತಿ ವರ್ಷ ರಾಜ್ಯೋತ್ಸವ ಸಂದರ್ಭದಲ್ಲಿ ಹಿರಿಯ ಸಾಹಿತಿಗಳನ್ನು ಗೌರವಿಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಪೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ಗೌರವಿಸಲಾಗುತ್ತಿದೆ.