ಅಲ್ಲಿ ಸಿಧು.. ಇಲ್ಲಿ ಸಿದ್ದು ಕಾಂಗ್ರೆಸ್ ತಿಥಿ ಮಾಡುತ್ತಾರೆ: ಆರ್.ಅಶೋಕ

226

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಇನ್ನು ಮೂರು ತಿಂಗಳು ಕಳೆದಿಲ್ಲ. ಆಗಲೇ ಅವರ ಅಭಿವೃದ್ಧಿ ಏನೆಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಅಭಿವೃದ್ಧಿ ಏನು? 125 ಶಾಸಕರಿದ್ದ ಪಕ್ಷವನ್ನು 75ಕ್ಕೆ ತೆಗೆದುಕೊಂಡು ಬಂದಿದ್ದು ಸಿದ್ದರಾಮಯ್ಯನವರ ಅಭಿವೃದ್ಧಿ ಎಂದು ಸಚಿವ ಆರ್.ಅಶೋಕ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರ ದುರಾಡಳಿತದಿಂದ 50 ಜನ ಶಾಸಕರು ಬಿಟ್ಟು ಹೋದವರು. ಹಲವರು ಪಕ್ಷ ತೊರೆದರು. ಹೀಗಾಗಿ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ. ದೆಹಲಿ ಮನೆಯೂ ಬಿರುಕು ಬಿಟ್ಟಿದೆ. ಪಂಜಾಬ್ ದಲ್ಲಿ ಸಿಧು, ಕರ್ನಾಟಕದಲ್ಲಿ ಸಿದ್ದು ಕಾಂಗ್ರೆಸ್ ಪಕ್ಷದ ತಿಥಿ ಮಾಡುತ್ತಾರೆ ಎಂದು ಕಿಡಿ ಕಾರಿದರು.




Leave a Reply

Your email address will not be published. Required fields are marked *

error: Content is protected !!