ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕರೋನಾ ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ, ಪ್ರತಿ ಭಾನುವಾರ ಬಂದ್ ಗೆ ರಾಜ್ಯ ಸರ್ಕಾರ ಆದೇಶಿಸಿದೆ. ಇದು ಎರಡನೇ ಭಾನುವಾರ. ಹೀಗಿದ್ರೂ, ಹೊರಗೆ ಬರುವ ಜನರು ಮಾಸ್ಕ್ ಧರಿಸದೆ ಬರುತ್ತಿದ್ದಾರೆ. ಇಂಥವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಾಸ್ಕ್ ಹಾಕದೆ ಬೈಕ್ ನಲ್ಲಿ ತಿರುಗಾಡುವ ಸವಾರರಿಗೆ ನಾಲತವಾಡ ಪಟ್ಟಣದಲ್ಲಿ ಪೊಲೀಸ್ರು ಬಿಸಿ ಮುಟ್ಟಿಸಿದ್ದಾರೆ. ಶರ್ಟ್ ಬಿಚ್ಚಿಸಿ ಅದನ್ನೇ ಮುಖಕ್ಕೆ ಕಟ್ಟಿಕೊಳ್ಳುವಂತೆ ಮಾಡಿ ಮಾಸ್ಕ್ ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್ ಧರಿಸದೆ ತಾಳಿಕೋಟೆ-ನಾರಾಯಣಪುರ ಮಾರ್ಗದಿಂದ ಬರ್ತಿರುವ ಬೈಕ್ ಸವಾರರಿಗೆ ಈ ರೀತಿ ಬುದ್ದಿ ಕಲಿಸಲಾಗಿದೆ.