ತಹಶೀಲ್ದಾರ್ ಕಚೇರಿಯಲ್ಲಿ 75 ಲಕ್ಷ ರೂಪಾಯಿ ವಂಚನೆ: ಬಯಲಾಯ್ತು ಸತ್ಯ

378

ಪ್ರಜಾಸ್ತ್ರ ಸುದ್ದಿ

ಯಾದಗಿರಿ: ಸುರಪುರ ತಹಶೀಲ್ದಾರ್ ಕಚೇರಿಯ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ಹಣ ವಂಚನೆ ಯಾಗಿರುವ ಪ್ರಕರಣ ನಡೆದಿದೆ. ಇದಕ್ಕೆ ಸಂಬಂದಿಸಿದಂತೆ ಕಚೇರಿಯ ಸಹಾಯಕ ಸಿ.ಎಸ್.ರಾಜು ಎಂಬುವನನ್ನ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ತಹಶೀಲ್ದಾರ್ ಕಚೇರಿಯಲ್ಲಿ ನೈಸರ್ಗಿಕ ವಿಕೋಪದ ಪ್ರಕರಣಗಳ ಕುರಿತು ಕರ್ತವ್ಯ ನಿರ್ವಹಿಸಲು ಎಫ್ ಡಿಎ ಸಿ.ಎಸ್.ರಾಜು ಎಂಬಾತನನ್ನು ನೇಮಿಸಲಾಗಿತ್ತು. ಆದ್ರೆ, ಈತನ ಬೇಜಾವಾಬ್ದಾರಿಯಿಂದ ಜೂನ್ 1ರಂದು ತಹಶೀಲ್ದಾರ್ ಕಚೇರಿಯ ಎಕ್ಸಿಸ್ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 75 ಲಕ್ಷಕ್ಕೂ ಹೆಚ್ಚು ವಂಚನೆ ನಡೆದಿದೆ.

ಚೆಕ್ ಪ್ರತಿಯನ್ನು ಎಕ್ಸಿಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುವ ವಿಜಯಕುಮಾರ ಚೌದ್ರಿ ಎಂಬಾತ ಕದ್ದಿದ್ರೂ, ಸಿ.ಎಸ್ ರಾಜು ಕಳೆದ 3 ತಿಂಗಳಿನಿಂದ ಗಮನವೇ ಹರಿಸಿಲ್ಲ. ಅಕೌಂಟ್ ವ್ಯವಹಾರದ ಕುರಿತು ಬ್ಯಾಂಕ್ ಬುಕ್ ನಲ್ಲಿ ದಾಖಲಿಸಲ್ಲ ಹಾಗೂ ತಹಶೀಲ್ದಾರ್ ಅವರ ಗಮನಕ್ಕೂ ತಂದಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!