ಪ್ರಾಣ ಸ್ನೇಹಿತರು ಇದೆಂಥಾ ಕೆಲಸ ಮಾಡಿಕೊಂಡರು!

326

ಪ್ರಜಾಸ್ತ್ರ ಸುದ್ದಿ

ಚಾಮರಾಜನಗರ: ಅವರಿಬ್ಬರು ಪ್ರಾಣ ಸ್ನೇಹಿತರು. ಒಬ್ಬರಿಗೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ಅವನ ಕೈ ಮೇಲೆ ಇವನ ಹೆಸರು, ಇವನ ಕೈ ಮೇಲೆ ಅವರ ಹೆಸರು ಹಚ್ಚೆ ಹಾಕಿಸಿಕೊಂಡಿದ್ದರು. ಇಂಥಾ ಸ್ನೇಹಿತರಿಬ್ಬರು ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅಂದ್ಹಾಗೆ ಈ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ. ನಾಗೇಂದ್ರ ಹಾಗೂ ಮನು ಅನ್ನೋ 19 ವರ್ಷದ ಸ್ನೇಹಿತರು ಇಂಥಾ ಕೆಲಸ ಮಾಡಿದ್ದು, ನಾಗೇಂದ್ರ ಮೃತಪಟ್ಟಿದ್ದಾನೆ. ಮನು ಸ್ಥಿತಿ ಚಿಂತಾಜನಕವಾಗಿದೆ.

ನಾಗೇಂದ್ರ ಹಾಗೂ ಮನು ಶಾಲಾ ದಿನಗಳಿಂದಲೂ ಸ್ನೇಹಿತರು. ಇತ್ತೀಚೆಗೆ ನಾಗೇಂದ್ರನ ಹೆತ್ತವರು ಮೃತಪಟ್ಟಿದ್ದಾರೆ. ಇದರಿಂದ ಆತ ತೀವ್ರ ದುಃಖದಲ್ಲಿದ್ದ. ನನಗೆ ಅಪ್ಪ, ಅಮ್ಮ ಇಲ್ಲ. ಜೀವನದಲ್ಲಿ ಬದುಕಿದ್ದು ಪ್ರಯೋಜನವಿಲ್ಲವೆಂದು ಆಗಾಗ ಹೇಳುತ್ತಿದ್ದನಂತೆ. ಇದೆ ಕಾರಣಕ್ಕೆ ಮದ್ಯದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!