ಅತ್ಯಾಚಾರದ ಬಗ್ಗೆ ಆಸ್ಪತ್ರೆ ಖಚಿತಪಡಿಸಿಲ್ಲ: ಹತ್ರಾಸ್ ಎಸ್ಪಿ

274

ಪ್ರಜಾಸ್ತ್ರ ಸುದ್ದಿ

ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಮನೀಷಾ ವಾಲ್ಮೀಕಿ ಅನ್ನೋ ಯುವತಿಯನ್ನ ಸಾಮೂಹಿಕವಾಗಿ ಅತ್ಯಾಚರವೆಸಗಿ ಮಾರಣಾಂತಿಕ ಹಲ್ಲೆಯಿಂದ ಸಾವನ್ನಪ್ಪಿದ್ದಾಳೆ ಅನ್ನೋದು ಇದೀಗ ತಿರುವು ಪಡೆದುಕೊಳ್ತಿದೆ. ಹತ್ರಾಸ್ ಎಸ್ಪಿ, ಯುವತಿ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಆಸ್ಪತ್ರೆ ಖಚಿತಪಡಿಸಿಲ್ಲವೆಂದು ಹೇಳಿದ್ದಾರೆ.

ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೂ ಮೊದ್ಲು ಯುವತಿಗೆ ಅಲಿಘಡ್ ಮುಸ್ಲಿಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿನ ವರದಿಯಲ್ಲಿ ಬಲವಂತದ ಲೈಂಗಿಕ ಕಿರುಕುಳದ ಬಗ್ಗೆ ಸ್ಪಷ್ಟತೆ ನೀಡಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ ವಿರ್ ಗುರುವಾರ ತಿಳಿಸಿದ್ದಾರೆ.

ಇನ್ನು ಹತ್ರಾಸ್ ಗಡಿ ಭಾಗ ಬಂದ್ ಮಾಡಲಾಗಿದೆ. ಹಳ್ಳಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗುಂಪಾಗಿ ಜನರು ಸೇರುವಂತಿಲ್ಲ. ಮಾಧ್ಯಮಗಳಿಗೂ ಅಲ್ಲಿ ಅವಕಾಶ ನಿರಾಕರಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಹಾಗಾದ್ರೆ ಇಲ್ಲಿ ನಡೆದಿರುವುದು ಏನು? ಪೊಲೀಸರು ಯಾಕೆ ರಾತ್ರೋ ರಾತ್ರಿ ಸಂತಸ್ತೆಯ ಅಂತ್ಯಾಸಂಸ್ಕಾರ ಮಾಡಿತು? ನಿಜಕ್ಕೂ ಅಂತ್ಯಸಂಸ್ಕಾರ ಮಾಡಿರುವುದು ಸಂತ್ರಸ್ತೆ ಮನೀಷಾ ವಾಲ್ಮೀಕಿದಾ ಅನ್ನೋದು ಹಲವು ಪ್ರಶ್ನೆಗಳು ಜನರಲ್ಲಿ ಕಾಡ್ತಿವೆ.




Leave a Reply

Your email address will not be published. Required fields are marked *

error: Content is protected !!