ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿಯ
ಸಿಂದಗಿ: ಮಕ್ಕಳ ಸಾಹಿತ್ಯದ ಕೃತಿಗಳಿಗೆ ಪಟ್ಟಣದ ವಿದ್ಯಾಚೇತನ ಪ್ರಕಾಶನ ನೀಡುವ ವಿದ್ಯಾಚೇತನ ಬಾಲ ಸಾಹಿತ್ಯ ಪುರಸ್ಕಾರಕ್ಕೆ, ಬೆಳಗಾವಿಯ ಬಸವರಾಜ ಗಾರ್ಗಿ ಹಾಗೂ ಸಿಂದಗಿಯ ಎಸ್.ಎಸ್ ಸಾತಿಹಾಳ ಆಯ್ಕೆ ಆಗಿದ್ದಾರೆ ಎಂದು ಪ್ರಕಾಶಕ ಹ.ಮ ಪೂಜಾರ ತಿಳಿಸಿದ್ದಾರೆ.
ಗಾರ್ಗಿ ಅವರ ‘ಹಾಸ್ಟೇಲ್ ಮಕ್ಕಳ ಕಥೆಗಳು, ಸಾತಿಹಾಳ ಅವರ ‘ಹಾಡು ಕೋಗಿಲೆ ಹಾಡು’ ಕೃತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಜುಲೈ 16ರಂದು ನಡೆಯುವ ಕಾರ್ಯಕ್ರಮದಲ್ಲಿ 5 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.