ವಿವಿಧ ಕಾಮಗಾರಿಗೆ ಚಾಲನೆ

349

ಸಿಂದಗಿ: ಯಂಕಂಚಿ-ಗುತ್ತರಗಿಯ ರಸ್ತೆ ಸೇತುವೆ, ಭಂಟನೂರ ರಸ್ತೆ ಸೇತುವೆ ಮತ್ತು ಮಾಡಬಾಳ, ಯಂಕಂಚಿ ಹಾಗೂ ನಾಗಾವಿ ಮೂಲಕ ಹಾಯ್ದು ಹೋಗುವ ಹಳ್ಳದ ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಸಿ ಮನಗೂಳಿ ಗುದ್ದಲಿ ಪೂಜೆ ಮಾಡಿದ್ರು. ಈ ವೇಳೆ ಮಾತ್ನಾಡಿದ ಅವರು ಕ್ಷೇತ್ರದಲ್ಲಿ ಕಾಮಗಾರಿ ಕೆಲಸಗಳು ಭರದಿಂದ ಸಾಗಿವೆ. ಇನ್ನೂ ಅನೇಕ ಶಾಶ್ವತ ಕಾಮಗಾರಿಗಳನ್ನ ತರುವ ಪ್ರಯತ್ನ ಮಾಡ್ತೀನಿ ಅಂತಾ ಹೇಳಿದ್ರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ ಮಾತ್ನಾಡಿದ್ರು. ಗುರಣಗೌಡ ಪಾಟೀಲ, ಶ್ರೀಶೈಲ ಕೊಪ್ಪದ, ವೈ.ಪಿ ನಾಯ್ಕೋಡಿ, ಕುಮಾರಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಚೇತನಗೌಡ ಪಾಟೀಲ ಉಪಸ್ಥಿತರಿದ್ರು. ಶರಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು. ಶಣ್ಮುಖಯ್ಯ ಹಿರೇಮಠ ನಿರೂಪಿಸಿದ್ರು.




Leave a Reply

Your email address will not be published. Required fields are marked *

error: Content is protected !!