ವೆಸ್ಟ್ ಇಂಡೀಸ್ ವಿರುದ್ಧ ಡಿಸೆಂಬರ್ 15ರಿಂದ ಶುರುವಾಗಲಿರುವ ಏಕದಿನ ಪಂದ್ಯದ ಸರಣಿಗೆ ಶಿಖರ ಧವನ್ ಅಲಭ್ಯರಾಗಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯನ್ನ ಎದುರಿಸ್ತಿರುವ ಧವನ್ ಏಕದಿನ ಸರಣಿಯಿಂದ ದೂರ ಉಳಿಯುವಂತಾಗಿದೆ. ಧವನ್ ಜಾಗಕ್ಕೆ ಕನ್ನಡಿಗನ ಎಂಟ್ರಿಯಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಮೂರು ಏಕದಿನ ಪಂದ್ಯಗಳ ಸರಣಿಗೆ ಕನ್ನಡಿಗ ಮಯಾಂಕ ಅಗರ್ವಾಲ್ ಗೆ ಅವಕಾಶ ನೀಡಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿಯಾಗಿ ಆಟವಾಡ್ತಿರುವ ಮಯಾಂಕಗೆ ಏಕದಿನ ಸರಣಿಯಲ್ಲಿ ಚಾನ್ಸ್ ನೀಡಲಾಗಿದೆ. ಟಿ-20ಯಲ್ಲಿ ಸಂಜು ಸಾಮನ್ಸ್ ಗೆ ಅವಕಾಶ ನೀಡಲಾಗಿತ್ತು.
ಡಿಸೆಂಬರ್ 15ರಂದು ಮೊದಲ ಪಂದ್ಯ, ಡಿಸೆಂಬರ್ 18 2ನೇ ಪಂದ್ಯ ಹಾಗೂ 22ಕ್ಕೆ 3ನೇ ಪಂದ್ಯ ನಡೆಯಲಿದೆ. ಈ ಪಂದ್ಯಗಳಲ್ಲಿ ಕನ್ನಡಿಗ ಮಯಾಂಕ ಅಗರ್ವಾಲ್ ಕಮಾಲ್ ಮಾಡುವ ನಿರೀಕ್ಷೆಯಿದೆ.