ಕಾರ್ಮಿಕರಿಗೆ ರೊಚ್ಚಿಗೆಬ್ಬಿಸಿದವನು ಅಂದರ್

230

ಮುಂಬೈ: ವಲಸೆ ಕಾರ್ಮಿಕರಿಗೆ ರೊಚ್ಚಿಗೆಬ್ಬಿಸಿ ಪ್ರತಿಭಟನೆ ನಡೆಸಲು ಮುಂದಾಗುವಂತೆ ಪ್ರಚೋದನೆ ನೀಡಿದ ಆರೋಪದ ಮೇಲೆ ಓರ್ವನನ್ನು ಬಂಧಿಸಲಾಗಿದೆ. ಸ್ವಯಂ ಘೋಷಿತ ಕಾರ್ಮಿಕ ನಾಯಕ ವಿನಯ ದುಬೆಯನ್ನ ಬಂಧಿಸಲಾಗಿದೆ.

ಲಾಕ್ ಡೌನ್ ಮುಂದುವರೆಸಿದ ಪರಿಣಾಮ, ಸೋಷಿಯಲ್ ಮೀಡಿಯಾದಲ್ಲಿ ಚಲೋ ಫರ್ ಕಿ ಅನ್ನೋ ಅಭಿಯಾನ ಆರಂಭಿಸಿ, ವದಂತಿ ಹಬ್ಬಿಸಿದ ಪರಿಣಾಮ ಬಾಂದ್ರಾ ನಿಲ್ದಾಣದಲ್ಲಿ ಸಾವಿರಾರು ಮಂದಿ ಸೇರುವಂತೆ ಮಾಡಿದ ಆರೋಪವಿದೆ.

ದುಬೆ ಹಾಕಿರುವ ಪೋಸ್ಟ್ ನಿಂದಾಗಿ ವಲಸೆ ಕಾರ್ಮಿಕರು ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿ ಅಪಾರ ಪ್ರಮಾಣದಲ್ಲಿ ನಿನ್ನೆ ಸಂಜೆ ಸೇರಿದ್ರು. ಈ ವೇಳೆ ಲಾಠಿ ಚಾರ್ಜ್ ಸಹ ಆಗಿತ್ತು. ಇದಕ್ಕೆ ವಿನಯ ದುಬೆ ಕಾರಣವೆಂದು ಆತನನ್ನ ಇಂದು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!