ಪ್ರಜಾಸ್ತ್ರ ಸುದ್ದಿ
ಧಾರವಾಡ: ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಇದೇ ರೀತಿ ಕೇಂದ್ರದಿಂದ ಮೋದಿ ಸರ್ಕಾರ 5 ಸಾವಿರ ರೂಪಾಯಿ ಕೊಡುತ್ತೆ ಎಂದು ಯಾರೋ ಹೇಳಿದ ಮಾತು ಕೇಳಿದ ಮಹಿಳೆಯರು ತಂಡೋಪ ತಂಡವಾಗಿ ಸೇರಿದೆ.
ಧಾರವಾಡ ನಗರ ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಈ ಸುಳ್ಳು ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಕಲಘಟಗಿ ತಾಲೂಕಿನ ಲೋಕಪೂಜ್ಯ ಗ್ಯಾಸ್ ಕಚೇರಿ ಮುಂದೆ ಶನಿವಾರ ಮುಂಜಾನೆಯೇ ಮಹಿಳೆಯರ ದಂಡು ಸೇರಿದೆ. ಕೇಂದ್ರ ಪೆಟ್ರೋಲಿಯಂ ಇಲಾಖೆಯಿಂದ ಎಲ್ಲ ಗ್ರಾಹಕರು ಇ ಕೆವೈಸಿ ಮಾಡಿಸಿ ಎಂದು ಹೇಳಲಾಗಿದೆ. ಇದರಿಂದ 5 ಸಾವಿರ ರೂಪಾಯಿ ಸಿಗುತ್ತೆ ಎಂದು ಯಾರೋ ಹೇಳಿದ ಮಾತು ಕೇಳಿ ಜನರು ಸೇರಿದ್ದಾರೆ.
ಇನ್ನು ಇ ಕೆವೈಸಿ ಮಾಡಿಸದಿದ್ದರೆ ಮುಂದಿನ ತಿಂಗಳಿನಿಂದ ಗ್ಯಾಸ್ ನೀಡುವುದಿಲ್ಲ ಎಂದು ಹಬ್ಬಿಸಿದ ಸುಳ್ಳು ಸುದ್ದಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಗ್ಯಾಸ್ ಕಚೇರಿ ಮುಂದೆ ಜಮಾಯಿಸುತ್ತಿದ್ದಾರೆ. ಈ ರೀತಿಯ ವದಂತಿಗಳಿಗೆ ಕಿವಿ ಕೊಟ್ಟು ಜನರು ದಿನವಿಡೀ ಕಾಯುವ ಸ್ಥಿತಿ ನಿರ್ಮಾಣವಾಗಿದೆ.