ವಿಜಯಪುರ: ಖಾಸಗಿ ಟಿವಿ ಕ್ಯಾಮೆರಾಮನ್ ಮೇಲೆ ಪಿಎಸ್ಐ ಹಲ್ಲೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಖಾಜಾ ಬಂದೇನವಾಜ್ ಉರುಸ್ ನಲ್ಲಿ ಹಮ್ಮಿಕೊಂಡಿದ್ದ ಬಂಡಿ ರೇಸ್ ವೇಳೆಯಲ್ಲಿ ಈ ಘಟನೆ ನಡೆದಿದೆ.
ಉರುಸ್ ನಲ್ಲಿ ಬಂಡಿ ರೇಸ್ ನೋಡಲು ಅಪಾರ ಪ್ರಮಾಣದಲ್ಲಿ ಜನ ಸೇರಿದ್ರು. ಈ ವೇಳೆ ಪೊಲೀಸ್ರು ಲಾಠಿ ಚಾರ್ಜ್ ಮಾಡಿದ್ದಾರೆ. ಆಗ ಇದನ್ನ ಚಿತ್ರಿಕರಣ ಮಾಡಲು ಹೋದ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಮೇಲೆ ಪಿಎಸ್ಐ ಹಲ್ಲೆಗೆ ಯತ್ನಿಸಿದ್ದಾರೆ. ಪಿಎಸ್ಐ ರಾಜೇಶ್ ಲಮಾಣಿ, ನನ್ನ ನೇಮ್ ಪ್ಲೇಟ್ ಶೂಟ್ ಮಾಡ್ತಿಯಾ ಅಂತಾ ಹೇಳಿ ಹಲ್ಲೆಗೆ ಯತ್ನಿಸಿದಾಗ ಕ್ಯಾಮೆರಾಮನ್ ಲಿಂಗರಾಜ್ ಗೆ ಕೈಗೆ ಗಾಯಗಳಾಗಿವೆ.