ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೆಹಲಿ ಸ್ಥಳೀಯ ಚುನಾವಣೆ ಸಂಬಂಧ ಆಮ್ ಆದ್ಮಿ ಪಕ್ಷದಲ್ಲಿ ದೊಡ್ಡ ಗಲಾಟೆ ಶುರುವಾಗಿದೆ. ಟಿಕೆಟ್ ಮಾರಿಕೊಂಡ ಆರೋಪದಲ್ಲಿ ಶಾಸಕರನ್ನೇ ಕಾರ್ಯಕರ್ತರು ಥಳಿಸಿರುವ ಘಟನೆ ನಡೆದಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಾಸಕ ಗುಲಾಬ್ ಸಿಂಗ್ ಯಾದವ್ ಅವರಿಗೆ ಕಾರ್ಯಕರ್ತರು ಥಳಿಸಿದ್ದಾರೆ. ಸೋಮವಾರ ಸಂಜೆ ಆಪ್ ಕಾರ್ಯಕರ್ತರ ಸಭೆಯನ್ನು ಶಾಸಕರು ಕರೆದಿದ್ದಾರೆ. ಈ ವೇಳೆ ಟಿಕೆಟ್ ಮಾರಾಟದ ವಿಚಾರ ಚರ್ಚೆಗೆ ಬಂದಿದೆ. ಅದು ತಾರಕಕ್ಕೆ ಹೋಗಿ ಶಾಸಕರ ಕಾಲರ್ ಹಿಡಿದು ಎಳೆದಾಡಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇದನ್ನು ವಿಪಕ್ಷಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವಾಗ್ದಾಳಿ ನಡೆಸಿವೆ.