ಪ್ರಜಾಸ್ತ್ರ ಸುದ್ದಿ
ನವದೆಹಲಿ: ರಾಷ್ಟ್ರಪತಿ ಚುನಾವಣೆ ವೇಳೆ ಬುಡಕಟ್ಟು ಸಮುದಾಯದ ಮುರ್ಮು ಅವರನ್ನು ಕಾಂಗ್ರೆಸ್ ಬೆಂಬಲಿಸಲಿಲ್ಲ. ಸ್ವಜನಪಾತ, ಮತೀಯವಾದಿಗಳಿಗೆ ಬೆಂಬಲ ನೀಡುತ್ತವೆ ಎಂದು ಪ್ರಧಾನಿ ಮೋದಿ, ಗುಜರಾತ್ ಚುನಾವಣೆ ವೇಳೆ ಕಿಡಿ ಕಾರಿದ್ದರು. ಇದಕ್ಕೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ಸನ್ನು ದೂರುವ ಬದಲು ಬಿಜೆಪಿ ದುರಾಡಳಿತದ ಬಗ್ಗೆ ಮಾತನಾಡಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖರ್ಗೆ ಅವರು, ಗುಜರಾತಿನಲ್ಲಿ ಯಾಕೆ ಮಕ್ಕಳ ಭವಿಷ್ಯ ಹಾಳಾಗಿದೆ, ಅಪೌಷ್ಠಿಕತೆಯಲ್ಲಿ 30 ರಾಜ್ಯಗಳಲ್ಲಿ 29 ಸ್ಥಾನದಲ್ಲಿ ಗುಜರಾತ್ ಯಾಕಿದೆ, ಶಿಶುಮರಣದಲ್ಲಿ 19 ಸ್ಥಾನದಲ್ಲಿದೆ. ನೀವು 27 ವರ್ಷಗಳ ಕಾಲ ನಿಭಾಯಿಸಿದ ಜವಾಬ್ದಾರಿಯ ಬಗ್ಗೆ ಗುಜರಾತಿನ ಜನರು ಉತ್ತರ ಕೇಳಲು ಬಯಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.